×
Ad

ಕುದ್ರೋಳಿ: ಕರ್ನಾಟಕ ಬ್ಯಾಂಕ್ ಕೊಠಡಿಯೊಳಗೆ ಬೆಂಕಿ

Update: 2016-12-27 23:28 IST

ಮಂಗಳೂರು, ಡಿ. 27: ಕುದ್ರೋಳಿ ದೇವಸ್ಥಾನ ಬಳಿ ಇರುವ ಕರ್ಣಾಟಕ ಬ್ಯಾಂಕ್‌ನ ಮೊದಲಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಕರ್ಣಾಟಕ ಬ್ಯಾಂಕ್‌ನ ಮೊದಲ ಅಂತಸ್ತಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ವ್ಯಕ್ತಿಯೋರ್ವ ರಾತ್ರಿ 8:40ಕ್ಕೆ ಅಗ್ನಿಶಾಮಕ ದಳದ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದವರು ಪಾಂಡೇಶ್ವರ ಅಗ್ನಿಶಾಮಕ ದಳದ ಕಚೇರಿಯಿಂದ ಒಂದು ವಾಹನವನ್ನು ಕಳುಹಿಸಿಕೊಟ್ಟಿದ್ದು, ತುಸು ಹೊತ್ತಿನಲ್ಲಿ ಇನ್ನೊಂದು ವಾಹನವನ್ನು ಕಳುಹಿಸಿ ಅಗ್ನಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಕರ್ಣಾಟಕ ಬ್ಯಾಂಕಿನ ಮೊದಲ ಅಂತಸ್ತಿನಲ್ಲಿರುವ ಕ್ಯಾಶ್ ಕೌಂಟರ್‌ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಅಂದಾಜು ನಷ್ಟ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News