×
Ad

ಬೈಕ್, ಕೆಎಸ್ಆರ್ ಟಿಸಿ ಬಸ್ಸು ಢಿಕ್ಕಿ : ಸವಾರ ಸಾವು , ಸಹಸವಾರ ಗಂಭೀರ

Update: 2016-12-28 17:32 IST

ಕಾಸರಗೋಡು , ಡಿ. 28 : ಕಾಸರಗೋಡು : ಬೈಕ್  ಮತ್ತು ಕೆ ಎಸ್ ಆರ್  ಟಿ ಸಿ ಬಸ್ಸು ಢಿಕ್ಕಿ  ಹೊಡೆದು  ಸವಾರ ಮೃತಪಟ್ಟು , ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಆದೂರು ಸಮೀಪ   ನಡೆದಿದೆ.

ಮೃತಪಟ್ಟವರನ್ನು  ಆದೂರಿನ  ಪಿ . ಕೆ  ಸವಾದ್ ( 27) ಎಂದು ಗುರುತಿಸಲಾಗಿದೆ.

ಜೊತೆಗಿದ್ದ  ಆದೂರು  ತೆರುವತ್ ನ   ಪಿ . ಸವಾದ್ (22) ರವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕರಿಬ್ಬರು ಅದೂರಿಂದ ಮುಳ್ಳೇರಿಯ ಕಡೆಗೆ ಸಂಚರಿಸುತ್ತಿದ್ದ  ಬುಲೆಟ್ ಬೈಕ್   ಆದೂರು 17  ನೇ ಮೈಲ್  ನಲ್ಲಿ   ಇನ್ನೊಂದು ವಾಹನ ಹಿಂದಿಕ್ಕುವ ರಭಸದಲ್ಲಿ  ಕೆಎಸ್ಆರ್ ಟಿಸಿ ಬಸ್ಸಿನ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಸವಾದ್ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.

ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ  ಕೊಂಡೊಯ್ಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News