ಸುಳ್ಳುಹೇಳಿ ಬಿಜೆಪಿ ಜನರನ್ನು ವಂಚಿಸಿದೆ: ಮುಲಾಯಂ ಸಿಂಗ್
Update: 2016-12-28 12:10 GMT
ಲಕ್ನೊ,ಡಿ. 28: ಕೇಂದ್ರ ಸರಕಾರದ ನೋಟು ಅಮಾನ್ಯ ಕ್ರಮ ಕುರಿತು ಸಮಾಜವಾದಿ ಪಾರ್ಟಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಬಿಜೆಪಿಯತ್ತ ಮತ್ತೊಮ್ಮೆ ಛಾಟಿ ಬೀಸಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿಯ ನೋಟು ಅಮಾನ್ಯ ಕ್ರಮದಿಂದಾಗಿ ರೈತರು, ವ್ಯಾಪಾರಿಗಳು, ಬಡವರು, ಕಾರ್ಮಿಕರು ಸರ್ವ ನಾಶವಾಗಿದ್ದಾರೆ. ರದ್ದಿ ಕಾಗದದಲ್ಲಿ ಈಗ ಹೊಸ ನೋಟುಗಳನ್ನು ತಯಾರಿಸಲಾಗಿದೆ. ಬಿಜೆಪಿ ಸುಳ್ಳು ಹೇಳಿ ಜನರನ್ನು ವಂಚಿಸಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ನೀಡಿದ ಯಾವ ಭರವಸೆಗಳು ಈವರೆಗೂ ಪೂರ್ಣಗೊಂಡಿಲ್ಲ. ಮೋದಿ ಘೋಷಿಸಿದ್ದ 15 ಲಕ್ಷ ರೂಪಾಯಿ ಯಾರ ಬ್ಯಾಂಕ್ ಖಾತೆಗೂ ಬಂದಿಲ್ಲ ಎಂದು ಲಕ್ನೊದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಯನ್ನು ಟೀಕಿಸಿದ್ದಾರೆ ಎಂದು ವರದಿ ತಿಳಿಸಿದೆ.