ಶಿಕ್ಷಕರಿಂದ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ : ಪ್ರಕರಣ ದಾಖಲು
Update: 2016-12-28 19:26 IST
ದಾವಣಗೆರೆ, ಡಿ.28 : ಕಾಮುಕ ಶಿಕ್ಷಕರಿಂದ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋ[ಪವು ಕೇಳಿ ಬಂದಿದ್ದು , ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.
ಪಿಟಿ. ಮಾಸ್ಟರ್ ರಾಘವೇಂದ್ರ, ಸಂಗೀತ ಶಿಕ್ಷಕ ಗಂಗಾಧರ ವಿರುದ್ದ ಲೈಂಗಿಕ ಕಿರುಕುಳದ ಾರೋಪ ಹೊರಿಸಲಾಗಿದೆ ಎಂದು ತಿಳಿದು ಬಂದಿದೆ.
ಹರಪನಹಳ್ಳಿ ತಾಲ್ಲೂಕಿನ ಮೂರರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆಯು ಸಂಭವಿಸಿದ್ದು , ಇದರ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಶಾಲೆಯಲ್ಲಿ ಪ್ರತಿಭಟನೆ ನಡೆದಿದೆ.
ಕಾಮುಕ ಶಿಕ್ಷಕರ ವಿರುದ್ದ ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.