‘ನಮ್ ಟೀಮ್’ ಮಣಿಪಾಲ ವಾರ್ಷಿಕೋತ್ಸವ
ಮಣಿಪಾಲ, ಜ.1: ‘ನಮ್ ಟೀಮ್’ ಮಣಿಪಾಲ ಇದರ 15ನೆ ವಾರ್ಷಿಕೋತ್ಸವ ಹಾಗೂ ಹೊಸವರ್ಷದ ಆಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ಸರಳೇಬೆಟ್ಟು ನೆಹರೂ ನಗರದಲ್ಲಿ ಉದ್ಘಾಟಿಸಿದರು.
ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗೂರ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಣಿಪಾಲದ ಕ್ಯಾಂಟಿನ್ನಲ್ಲಿ 10 ರೂ.ಗೆ ಅನ್ನ ಸಾಂಬಾರು ನೀಡುತ್ತಿರುವ ಕಲ್ಯಾಣಪುರದ ಗಣೇಶ್ ಮಲ್ಯ ಹಾಗೂ ನಿಟ್ಟೆ ಕಾಲೇಜಿ ನಲ್ಲಿ ಎಂ.ಟೆಕ್ನಲ್ಲಿ ಚಿನ್ನದ ಪದಕ ಪಡೆದ ಗಣೇಶ್ ಪ್ರಸಾದ್ ನೆಹರೂನಗರ ಅವರನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ, ಉದ್ಯಮಿ ಬಾಲಕೃಷ್ಣ ಶೆಟ್ಟಿ ಮೂಡ ನಿಡಂಬೂರು, ತಿಮ್ಮಪ್ಪಶೆಟ್ಟಿ ಶೆಟ್ಟಿಬೆಟ್ಟು, ಕಲಾವಿದ ವಸಂತ ಶೆಣೈ, ಡಾ.ಸಂದೀಪ್ ಸನಿಲ್ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು. ವಾಲ್ಟರ್ ಡಿಸೋಜ ಕೊಳಲಗಿರಿ, ಗಣೇಶ್ ಶೆಟ್ಟಿ ಕೀಳಿಂಜೆ, ಶ್ರೀಕಾಂತ್ ಆಚಾರ್ಯ, ಸುೀರ್ ಶೆಟ್ಟಿ, ಹೈಟೆಕ್ ಪರ್ಕಳ, ಉಮೇಶ್ ಮಣಿಪಾಲ ಮೊದಲಾದವರು ಉಪಸ್ಥಿತರಿದ್ದರು.
ಜಿ.ಎಂ. ವಿದ್ಯಾನಿಕೇತನ ಶಾಲೆಯ ಶಿಕ್ಷಕಿ ರಂಜಿತಾ ಬಾರ್ಕೂರು ಮಕ್ಕಳಿಗೆ ಕಾರ್ಯಕ್ರಮ ನಡೆಸಿಕೊಟ್ಟರು. ಜ್ಯೋತಿ ಗಣೇಶ್ರಾಜ್ ವಂದಿಸಿದರು.