ಶಿರಿಯಾರ: ಗುರಿಕಾರರರು, ಸಾಧಕರಿಗೆ ಸನ್ಮಾನ

Update: 2017-01-02 17:19 GMT

ಬ್ರಹ್ಮಾವರ, ಜ.2: ಶಿರಿಯಾರ ಮೊಗವೀರ ಗ್ರಾಮ ಸಭಾದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ, ಸಹಾಯಧನ ವಿತರಣೆ, ಸಾಧಕರು ಮತ್ತು ಗುರಿಕಾರರಿಗೆ ಸನ್ಮಾನ ಕಾರ್ಯಕ್ರಮವನ್ನು  ಶಿರಿಯಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಜಿ.ಶಂಕರ್  ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಬೆಣ್ಣೆಕುದ್ರು ಶ್ರೀ ಕುಲಮ ಹಾಸಿ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್ ವಹಿಸಿದ್ದರು.

ಈ ಸಂದರ್ಭ ಶಿರಿಯಾರ ಮೊಗವೀರ ಗ್ರಾಮ ಸಭಾ ವ್ಯಾಪ್ತಿಯ ಗುರಿಕಾರರಾದ ಆನಂದ ಮರಕಾಲ ಶಿರಿಯಾರ, ಬಾಬು ಮರಕಾಲ ಕಲ್ಬೆಟ್ಟು, ರಾಮ ಮರಕಾಲ ಬಂಚಾಡಿಮನೆ ಹಾಗೂ ನಿವೃತ್ತ ಯೋಧ ವಾಸುದೇವ ಎತ್ತಿನಟ್ಟಿ, ಉದಯ ಮರಕಾಲ, ಕ್ರೀಡಾಪ್ರತಿಭೆ ದೀಕ್ಷಾ ಅವರನ್ನು ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ್ ಎಚ್., ಬಾರ್ಕೂರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ವಿಶ್ವನಾಥ ಎಂ.ಕೂರಾಡಿ, ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಗಣೇಶ ಕಾಂಚನ್, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ತಿಮ್ಮ ಮರಕಾಲ, ಸಂಘಟನೆ ಮಂದಾರ್ತಿ ಘಟಕದ ಮಾಜಿ ಅಧ್ಯಕ್ಷ ಅಶೋಕ ಕುಂದರ್ ಮಂದಾರ್ತಿ, ಅಧ್ಯಕ್ಷ ರಾಘವೇಂದ್ರ ಬಿಲ್ಲಾಡಿ, ಉದ್ಯಮಿ ಪ್ರಸಾದ್ ಬಂಗೇರ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News