ಭೂಮಿ ಕೇಂದ್ರದಲ್ಲಿ ಪಹಣಿ ವಿತರಣೆ ತಾತ್ಕಾಲಿಕ ಸ್ಥಗಿತ

Update: 2017-01-02 18:42 GMT

ಮಂಗಳೂರು, ಜ.2: ದ.ಕ. ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳ ಭೂಮಿ ಕೇಂದ್ರದಲ್ಲಿ ಜ.2ರಿಂದ 10 ದಿನಗಳ ಕಾಲ 2016-17 ಹಿಂಗಾರು ಸಾಲಿನ ಪಹಣಿಗಳಿಗೆ ಡಿಜಿಟಲ್ ಸೈನಿಂಗ್ ಪ್ರಕ್ರಿಯೆ ನಡೆ ಯುತ್ತಿರುವುದರಿಂದ ಸದರಿ ಕೇಂದ್ರದಲ್ಲಿ ಪಹಣಿ ವಿತರಿಸಲು ಅಸಾಧ್ಯ ವಾಗಿದೆ.

ಸಾರ್ವಜನಿಕರು ಈ ಅವಧಿಯಲ್ಲಿ ತಾಲೂಕಿನ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಹಾಗೂ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಹಣಿ ಪತ್ರಗಳನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News