​ಜ.7: ಆಕಾಶವಾಣಿಯಲ್ಲಿ ಸ್ವರ ಮಂಟಮೆ

Update: 2017-01-05 11:41 GMT

ಮಂಗಳೂರು, ಜ.5: ಮಂಗಳೂರು ಆಕಾಶವಾಣಿಯ ತುಳು ವಿಭಾಗದಲ್ಲಿ ನೂತನವಾಗಿ ಆರಂಭಿಸಿದ ತುಳು ಕೃತಿ ಬಿಡುಗಡೆಯ ಕಾರ್ಯಕ್ರಮ ಜ.7 ಬೆಳಗ್ಗೆ 10:30ರಿಂದ 11:30ರವರೆಗೆ ‘ಸ್ವರ ಮಂಟಮೆ’ಯಲ್ಲಿ ನೇರ ಪ್ರಸಾರವಾಗಲಿದೆ.
  ಎಚ್.ಬಿ.ಎಲ್ ರಾವ್ ಪ್ರಧಾನ ಸಂಪಾದಕತ್ವದಲ್ಲಿ ‘ಅಣಿ ಅರದಳ, ಸಿರಿ ಸಿಂಗಾರ, ಭೂತರಾಧನೆಯ, ಅಣಿ ವೈವಿಧ್ಯ ಬಣ್ಣಗಾರಿಕೆ’ ಬಿಡುಗಡೆ ನಡೆಯಲಿದೆ. ಮಂಗಳೂರು ಆಕಾಶವಾಣಿಯ ಸ್ಟುಡಿಯೋದಲ್ಲಿ ಆಯೋಜಿಸಿದ ಈ ನೇರ ಪ್ರಸಾರದ ನೂತನ ಮಾದರಿಯ ಕಾರ್ಯಕ್ರಮದಲ್ಲಿ ಹರಿನಾರಾಯಣ ಆಸ್ರಣ್ಣ ಕಟೀಲು ಕೃತಿ ಬಿಡುಗಡೆ ಮಾಡಲಿದ್ದಾರೆ. ಕೆ.ಎಲ್. ಕುಂಡಂತಾಯ ಕೃತಿ ವಿಮರ್ಶೆ ಮಾಡಲಿದ್ದಾರೆ.
 ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಎಚ್‌ಬಿಎಲ್ ರಾವ್ ಮತ್ತಿತರರು ಭಾಗವಹಿಸಲಿದ್ದಾರೆ. ನಿರೂಪಕರು ಕೃತಿ ವಾಚನ ಹಾಗೂ ಮುನ್ನುಡಿ-ಬೆನ್ನುಡಿಯನ್ನು ತೆರೆದುಕೊಡಲಿದ್ದಾರೆ. ಆಸಕ್ತರು 0824 -2211999, ಮೊ.ಸಂ. 8277038000 ಸಂಪರ್ಕಿಸಿ ಲೇಖಕರು, ಬಿಡುಗಡೆ ಮಾಡಿದವರು ಅಥವಾ ವಿಮರ್ಶಕರ ಜೊತೆ ನೇರ ಸಂವಾದ ನಡೆಸಲು ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News