ಬೆಳೆ ವಿಮೆ ನೊಂದಣಿ ದಿನಾಂಕ ವಿಸ್ತರಣೆ
Update: 2017-01-05 19:21 IST
ಉಡುಪಿ, ಜ.5: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಪಸಲ್ ಬಿಮಾ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಅಧಿಸೂಚಿಸಲಾದ ಹಿಂಗಾರು ಹಂಗಾಮಿನ ಬೆಳೆಗಳಲ್ಲಿ ಬೆಳೆವಿಮೆ ನೊಂದಾವಣೆಗೆ ಈ ಮೊದಲು ನಿಗದಿ ಪಡಿಸಲಾಗಿದ್ದ ಕೊನೆಯ ದಿನವಾದ ಡಿ.31ನ್ನು ಪರಿಷ್ಕರಿಸಿ ಜ.10ರವರೆಗೆ ವಿಸ್ತರಿಸಲಾಗಿದೆ.
ರೈತರು ಇದರ ಪ್ರಯೋಜನವನ್ನು ಪಡೆದು ಬೆಳೆ ವಿಮೆಗೆ ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೊಂದಾಯಿಸಿ ಕೊಳ್ಳುವಂತೆ ಜಂಟಿ ಕೃಷಿ ನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.