×
Ad

ಮಣಿಪಾಲದಲ್ಲಿ ಇಂದಿನಿಂದ ರಾಜಸ್ತಾನಿ ಗ್ರಾಮೀಣ ಮೇಳ

Update: 2017-01-05 23:07 IST

ಉಡುಪಿ, ಜ.5: ರಾಜಸ್ತಾನ ರಾಜ್ಯದ ಗ್ರಾಮೀಣ ಕರಕುಶಲ ಮೇಳವೊಂದು ನಾಳೆಯಿಂದ ಜ.17ರವರೆಗೆ ಮಣಿಪಾಲದ ಆರ್‌ಎಸ್‌ಬಿ ಭವನದಲ್ಲಿ ನಡೆಯಲಿದೆ ಎಂದು ಮೇಳದ ಸಂಘಟಕ ದಿನೇಶ್ ಶರ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕರಕುಶಲ ವಸ್ತುಗಳ ಈ ಮೇಳವನ್ನು ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು ಅಪರಾಹ್ನ 11:00 ಗಂಟೆಗೆ ಉದ್ಘಾಟಿಸಲಿದ್ದಾರೆ. ರಾಜಸ್ತಾನದ ಕೈಮಗ್ಗದ ಬಟ್ಟೆಗಳಲ್ಲೇ, ಕರಕುಶಲ ಜ್ಯುವೆಲ್ಲರಿ, ಪೈಂಟಿಂಗ್‌ಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.

ಇದರೊಂದಿಗೆ ಸಿಲ್ಕ್ ಪೈಂಟಿಂಗ್, ರವಿವರ್ಮ ಪೈಂಟಿಂಗ್, ಮೀನಾಕ್ಷಿ ಜ್ಯುವೆಲ್ಲರಿ, ಎಲ್ಲಾ ತರದ ರೇಶ್ಮೆ ಮತ್ತು ಬೆಂಗಾಲ್ ಸೀರೆಗಳ ಪ್ರದರ್ಶನವಿರುತ್ತದೆ. ಮೇಳವು ಬೆಳಗ್ಗೆ 10ರಿಂದ ರಾತ್ರಿ 8:30ರವರೆಗೆ ತೆರೆದಿರುತ್ತದೆ.

ಮೇಳವನ್ನು ರಾಜಸ್ತಾನ್ ಆರ್ಟ್ ಮತ್ತು ಕ್ರಾಫ್ಟ್ ಆಯೋಜಿಸಿದೆ ಎಂದು ಶರ್ಮ ತಿಳಿಸಿದರು. ಮಂಗಳೂರಿನ ಸುಜೀರ್ ವಿನೋದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News