ಪಡೀಲ್: ಟಿಪ್ಪರ್-ಜೀಪು ಮಧ್ಯೆ ಅಪಘಾತ, ಚಾಲಕ ಮೃತ್ಯು
Update: 2017-01-10 20:22 IST
ಮಂಗಳೂರು, ಜ.10: ನಗರದ ಪಡೀಲ್ ರೈಲ್ವೆ ಮೇಲ್ಸೆತುವೆಯ ಬಳಿ ಟಿಪ್ಪರ್ ಮತ್ತು ಜೀಪುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಜೀಪು ಚಾಲಕ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಉಡುಪಿ ನಿವಾಸಿ ಮುಹಮ್ಮದ್ ಶಕೀಲ್ ಶರೀಫ್ (35) ಮೃತಪಟ್ಟವರು.
ಸೋಫಾ ಮತ್ತು ಬೆಡ್ಗಳನ್ನು ರಿಪೇರಿ ಮಾಡುತ್ತಿದ್ದ ಇವರು ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿಗೆ ಜೀಪಿನಲ್ಲಿ ಬರುತ್ತಿದ್ದರು. ಆವಾಗ ಮಂಗಳೂರಿನಿಂದ ಅಡ್ಯಾರ್ ಕಣ್ಣೂರು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಇದರಿಂದ ಜೀಪು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೆ ಚಾಲಕ ಶರೀಫ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.