ಉಡುಪಿ: ಜ.12ರಂದು ಬೊಳುವಾರ ಸಾಹಿತ್ಯ-ಸಂವಾದ-ಅಭಿನಂದನೆ

Update: 2017-01-10 15:15 GMT

ಉಡುಪಿ, ಜ.10: ಮಣಿಪಾಲ ವಿವಿಯ ಡಾ.ಟಿಎಂಎ ಪೈ ಭಾರತೀಯ ಸಾಹಿತ್ಯ ಪೀಠ, ಉಡುಪಿ ರಥಬೀದಿ ಗೆಳೆಯರು ಸಹಯೋಗದೊಂದಿಗೆ ಜ.12ರ ಗುರುವಾರ ಸಂಜೆ 4:00 ಗಂಟೆಗೆ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರ ಮಹಮ್ಮದ್ ಕುಂಞ ‘ಸಾಹಿತ್ಯ-ಸಂವಾದ- ಅಭಿನಂದನೆ’ಯನ್ನು ಹಮ್ಮಿಕೊಂಡಿದೆ.

ಸಮಾರಂಭದಲ್ಲಿ ಖ್ಯಾತ ಲೇಖಕ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಬೊಳುವಾರ ಅವರ ಪ್ರಶಸ್ತಿ ಪುರಸ್ಕೃತ ಕೃತಿ ‘ಸ್ವಾತಂತ್ರ ಓಟ’ದ ಕುರಿತು ಮಾತನಾಡಲಿದ್ದಾರೆ. ಖ್ಯಾತ ಮಕ್ಕಳ ನಾಟಕ ನಿರ್ದೇಶಕ ಐ.ಕೆ.ಬೊಳುವಾರ ‘ನನ್ನ ಅಣ್ಣ ಬೊಳುವಾರು’ ಕುರಿತು ಮಾತನಾಡಲಿದ್ದಾರೆ.

ಕೊನೆಯಲ್ಲಿ ಬೊಳುವಾರು ಅವರಿಗೆ ಅವರ ಸ್ನೇಹಿತರು ಹಾಗೂ ಅಭಿಮಾನಿ ಗಳಿಂದ ಆತ್ಮೀಯ ಸನ್ಮಾನವೂ ನಡೆಯಲಿದೆ ಎಂದು ಡಾ.ಟಿಎಂಎ ಪೈ ಭಾರತೀಯ ಸಾಹಿತ್ಯ ಪೀಠದ ಅಧ್ಯಕ್ಷೆ ವೈದೇಹಿ ಹಾಗೂ ರಥಬೀದಿ ಗೆಳೆಯರು ಅಧ್ಯಕ್ಷ ಮುರಲೀಧರ ಉಪಾಧ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News