ಬಾಪು ಮುಸ್ಲಿಯಾರ್ ನಿಧನ : ರಾಜ್ಯ ದಾರಿಮಿ ಉಲಮಾ ಒಕ್ಕೂಟದಿಂದ ಸಂತಾಪ
Update: 2017-01-10 22:24 IST
ಪುತ್ತೂರು, ಜ.10 : ಮಂಗಳವಾರ ನಿಧನರಾದ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಜೊತೆ ಕಾರ್ಯದರ್ಶಿ ಬಾಪು ಮುಸ್ಲಿಯಾರ್ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ, ಕಾರ್ಯದರ್ಶಿ ಅಬ್ದುಲ್ ಅಝೀರ್ ದಾರಿಮಿ, ಖಜಾಂಜಿ ಕೆ.ಆರ್. ಹುಸೈನ್ ದಾರಿಮಿ ಮತ್ತು ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.