ಜ. 12ರಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ವತಿಯಿಂದ ’ಪ್ರವಾದಿ ಜೀವನ ಮತ್ತು ಸಂದೇಶ’
Update: 2017-01-11 19:55 IST
ಬಂಟ್ವಾಳ, ಜ. 11: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ’ಹುಬ್ಬುನ್ನೆಬಿ ಅಭಿಯಾನ’ದ ಅಂಗವಾಗಿ ಬಂಟ್ವಾಳ ತಾಲೂಕು ಆಶ್ರಯದಲ್ಲಿ ’ಪ್ರವಾದಿ ಜೀವನ ಮತ್ತು ಸಂದೇಶ’ ಸಾರ್ವಜನಿಕ ಕಾರ್ಯಕ್ರಮ ಜ. 12ರಂದು ರಾತ್ರಿ 8:15ಕ್ಕೆ ಬಿ.ಸಿ.ರೋಡ್ ಸಮೀಪದ ತಲಪಾಡಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಮುಖಂಡ ಜಾಫರ್ ಸಾದಿಕ್ ಫೈಝಿ ಮುಖ್ಯ ಪ್ರಭಾಷಣಗೈಯಲಿದ್ದಾರೆ . ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.