ಪ್ರತಿಭಟನೆ-ರಸ್ತೆತಡೆ : 16 ಮಂದಿ ಎಬಿವಿಪಿ ಕಾರ್ಯಕರ್ತರ ಬಂಧನ, ಬಿಡುಗಡೆ

Update: 2017-01-11 17:18 GMT

ಮಂಗಳೂರು, ಜ. 11: ಶೃಂಗೇರಿಯಲ್ಲಿ ಎಬಿವಿಪಿ ಕಾರ್ಯಕರ್ತ ಅಭಿಷೇಕ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅನುಮತಿ ಪಡೆಯದೆ ಏಕಾಏಕಿ ಬೆಸೆಂಟ್ ಕಾಲೇಜು ಬಳಿ ರಸ್ತೆ ತಡೆಮಾಡಿದ ಸುಮಾರು 14 ಮಂದಿ ಎಬಿವಿಪಿ ಕಾರ್ಯಕರ್ತರನ್ನು ಬುಧವಾರ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.

ಜಯೇಶ್, ತೇಜಸ್ವಿ, ವಿಜಿತ್, ಶರಣ ಬಸಪ್ಪ, ಹಿತೇಶ್, ನವೀನ್, ಅಕ್ಷಯ್, ರಾಹುಲ್, ವೀಕ್ಷಣ್, ಧನರಾಜ್, ಭವಿತ್, ವರುಣ್, ಸಾಯಿ ಹಾಗೂ ಅನುಷಾ ಅವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿದೆ. ಸುಮಾರು 50 ಮಂದಿ ಎಬಿವಿಪಿ ಕಾರ್ಯಕರ್ತರು ಯಾವುದೇ ಅನುಮತಿಯನ್ನು ಪಡೆಯದೆ ಹಠಾತ್ತಾಗಿ ಪ್ರತಿಭಟನೆ ಹಾಗೂ ರಸ್ತೆ ನಡೆಸಿದ್ದರು.

ಸುಮಾರು ಅರ್ಧ ಗಂಟೆ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಸಾರ್ವಜನಿಕರು ಹಾಗೂ ಪೊಲೀಸರೊಂದಿಗೆ ಉದ್ದಟತದಿಂದ ವರ್ತಿಸಿದ್ದಾರೆ. ಪ್ರತಿಭಟನಾ ನಿರತರ ಪೈಕಿ 16 ಮಂದಿಯನ್ನು ಬಂಧಿಸಲಾಗಿದ್ದು, ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಬರ್ಕೆ ಠಾಣಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News