ಎಂಡೋಸಲ್ಫಾನ್: ಪರಿಹಾರ ನೀಡಲು ಡಿವೈಎಫ್ಐ ಒತ್ತಾಯ
Update: 2017-01-12 18:08 IST
ಮಂಗಳೂರು, ಜ.12: ಎಂಡೋಸಲ್ಫಾನ್ಗೆ ಸಂಬಂಧಿಸಿ ಕೇರಳದ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಕರ್ನಾಟಕದ ಸಂತ್ರಸ್ತರಿಗೂ ಪರಿಹಾರ ನೀಡಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿ ಒತ್ತಾಯಿಸಿದೆ.
ಸುಪ್ರೀಂ ಕೋರ್ಟ್ ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ, ಪುನರ್ವಸತಿ ಪ್ಯಾಕೇಜ್ ನೀಡಲು ಆದೇಶಿಸಿದೆ. ಕರ್ನಾಟಕದ ಕರಾವಳಿ ಭಾಗಗಳಲ್ಲಿ ಎಂಡೋ ಸಲ್ಫಾನ್ ಪೀಡಿತರ ಸಂಖ್ಯೆ ಕೇರಳಕ್ಕಿಂತ ಅಧಿಕವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು. ಕೇರಳ ಮಾದರಿಯಲ್ಲಿ ಸಂತ್ರಸ್ತರ ಪಟ್ಟಿ ತಯಾರಿಸಬೇಕು. ಎಂಡೋ ಸಲ್ಫಾನ್ ಯಾವುದೇ ರೂಪದಲ್ಲಿಯೂ ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಸುಪ್ರೀಂ ಕೋರ್ಟ್ ಕೇರಳಕ್ಕೆ ನೀಡಿದ ಆದೇಶವನ್ನು ಕರ್ನಾಟಕದಲ್ಲೂ ಸ್ವಯಂಪ್ರೇರಣೆಯಿಂದ ಸರಕಾರ ಪಾಲಿಸಬೇಕು ಎಂದು ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ...