ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
Update: 2017-01-16 20:48 IST
ಕೊಲ್ಲೂರು, ಜ.16: ಮುದೂರು ಗ್ರಾಮದ ಉದಯನಗರದ ಪಿ.ಜೆ. ಅಬ್ರಾಹಾಂ ಎಂಬವರ ಮಗ ಬಿಬಿನ್(29) ಎಂಬಾತ ಜ.15ರಂದು ಬೆಳಗ್ಗೆ 7ಗಂಟೆಗೆ ಮನೆಯಿಂದ ಕುಂದಾಪುರಕ್ಕೆ ಬಸ್ಸಿನಲ್ಲಿ ಹೋಗಿ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಇಳಿದವ ನಾಪತ್ತೆಯಾಗಿದ್ದಾನೆ.
ಇನ್ನೊಂದು ಪ್ರಕರಣದಲ್ಲಿ ಕೊಲ್ಲೂರು ಗ್ರಾಮದ ಮಾವಿನಕಾರು ನಿವಾಸಿ ನಾರಾಯಣ ಶೆಟ್ಟಿ ಎಂಬವರ ಮಗಳು ಚಂದ್ರಕಲಾ(21) ಎಂಬಾಕೆ ಜ.14 ರಂದು ಬೆಳಗ್ಗೆ 11ಗಂಟೆಗೆ ಮಾರಣಕಟ್ಟೆ ದೇವಸ್ಥಾನ ಜಾತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.