ಜ.22ರಂದು ಕಿನ್ಯ ಮೀನಾದಿಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ

Update: 2017-01-19 04:47 GMT

ದೇರಳಕಟ್ಟೆ, ಜ.19: ಕಿನ್ಯಾದ ಮೀನಾದಿಯಲ್ಲಿರುವ ಎಸ್.ವೈ.ಎಸ್.-ಎಸ್ಸೆಸ್ಸೆಫ್ ಶಾಖೆಯ ಜಂಟಿ ಆಶ್ರಯದಲ್ಲಿ ತಾಜುಲ್ ಉಲಮಾ ಅನುಸ್ಮರಣೆ, ದಫ್ ಪ್ರದರ್ಶನ ಮತ್ತು ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಜ.22ರಂದು ಮೀನಾದಿಯ ಕುತುಬಿ ನಗರ ಜಂಕ್ಷನ್ ನ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.

ಅಪರಾಹ್ನ 2:30ಕ್ಕೆ ಕಿನ್ಯ ವಲಿಯುಲ್ಲಾಹಿ ಹಝ್ರತ್ ಹುಸೈನ್ ಮುಸ್ಲಿಯಾರ್(ಖ.) ಮಖಾಂ ಝಿಯಾರತ್‌ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಅಸರ್ ನಮಾಝಿನ ಬಳಿಕ ಎಸ್ಸೆಸ್ಸೆಫ್ ಹಾಗೂ ಎಸ್.ಬಿ.ಎಸ್. ವಿದ್ಯಾರ್ಥಿಗಳಿಂದ ಕಲಾ ಕಾರ್ಯಕ್ರಮ ನಡೆಯಲಿದೆ. ಮಗ್ರಿಬ್ ನಮಾಝಿನ ಬಳಿಕ ತಾಜುಲ್ ಹುದಾ ದಫ್ ಸಂಘದ ನೇತೃತ್ವದಲ್ಲಿ ದಫ್ ಪ್ರದರ್ಶನ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8ಕ್ಕೆ ಅಸ್ಸೈಯದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ ಕಡಲುಂಡಿಯವರ ದುಆ ದೊಂದಿಗೆ ಆರಂಭಗೊಳ್ಳುವ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವನ್ನು ಶೈಖುನಾ ಅಲಿಕುಂಞಿ ಉಸ್ತಾದ್ ಶಿರಿಯ ಉದ್ಘಾಟಿಸಲಿದ್ದಾರೆ.

ಮುಹಮ್ಮದಲಿ ಸಖಾಫಿ ಸುರಿಬೈಲ್ ಅಧ್ಯಕ್ಷತೆ ವಹಿಸುವರು. ವಹ್ಹಾಬ್ ಸಖಾಫಿ ಮಂಬಾಡ್ ಮುಖ್ಯಭಾಷಣ ಮಾಡಲಿದ್ದಾರೆ. ಕಾರ್ಯಕ್ರಮವು ಕರ್ನಾಟಕ ಸುನ್ನಿ ಆನ್‌ಲೈನ್ ಕ್ಲಾಸ್ ರೂಮ್(KSOCR Media)ನಲ್ಲಿ ನೇರ ಪ್ರಸಾರಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News