ಕೊಂಕಣಿ ಲೋಕೋತ್ಸವ: ಮುಖ್ಯಮಂತ್ರಿಗೆ ಆಹ್ವಾನ

Update: 2017-01-19 13:25 GMT

ಮಂಗಳೂರು, ಜ.19: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ವತಿಯಿಂದ ಫೆಬ್ರವರಿಯಲ್ಲಿ ನಡೆಯುವ ಲೋಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಕಾಡಮಿಯ ಅಧ್ಯಕ್ಷ ರಾಯ್‌ಕ್ಯಾಸ್ಟಲಿನೊ ನೇತೃತ್ವದ ತಂಡ ಗುರುವಾರ ಆಹ್ವಾನ ನೀಡಿತು.

ಮಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಅಕಾಡಮಿಯ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮಾಡಲು ಮನವಿ ಮಾಡಿತು.

ಈ ಸಂದರ್ಭ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ, ಅಕಾಡಮಿಯ ರಿಜಿಸ್ಟ್ರಾರ್ ಡಾ.ಬಿ. ದೇವದಾಸ ಪೈ, ಸದಸ್ಯ ಲಾರೆನ್ಸ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News