×
Ad

ಭಟ್ಕಳ : ಜ.21 ರಂದು ನವೀಕೃತ ಅರ್ಬನ್ ಬ್ಯಾಂಕ್ ಮುಖ್ಯ ಶಾಖೆ ಕಟ್ಟಡ ಉದ್ಘಾಟನೆ

Update: 2017-01-20 20:30 IST

ಭಟ್ಕಳ , ಜ.20 : ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಅರ್ಬನ್ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಭಟ್ಕಳದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಮುಖ್ಯ ಶಾಖೆಯ ಕಟ್ಟಡ ಆಲ್ಕೋ ಪೆನೆಲಿಂಗ್ ವಿನ್ಯಾಸದೊಂದಿಗೆ ನವೀಕೃತಗೊಂಡಿದ್ದು, ಜ.21ರಂದು ಶಾಸಕ ಮಾಂಕಾಳ್ ವೈದ್ಯರಿಂದ ಉದ್ಗಾಟನೆಗೊಳ್ಳುತ್ತಿರುವುದಾಗಿ ಪ್ರಧಾನ ವ್ಯವಸ್ಥಾಪಕ ಎಸ್.ಎ.ರಝಾಕ್ ತಿಳಿಸಿದ್ದಾರೆ.

ಮುಂಬೈನ ಇನ್ಫ್ರಾ ಟೆಕ್ನೊಲೋಜಿಯ ಅಧ್ಯಕ್ಷ ಮಣಿಂದರ್ ಸಿಂಗ್ ರುಪೆ ಡೆಬಿಟ್ ಕಾರ್ಡ್‌ನ್ನು ಬಿಡುಗಡೆಗೊಳಿಸಲಿದ್ದಾರೆ.

ಗ್ರಾಹಕರಿಗೆ ತ್ವರಿತ ಹಾಗೂ ದಕ್ಷ ಸೇವೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಈ ಬ್ಯಾಂಕು ಐಎಸ್‌ಒ 9001:2015 ಪ್ರಮಾಣಪತ್ರವನ್ನು ಹೊಂದಿದ್ದು ಉ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಜೆ.ಎಸ್.ಜಯಪ್ರಕಾಶ ಪ್ರಮಾಣಪತ್ರ ವಿತರಿಸಲಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಮುರುಡೇಶ್ವರ ಹಾಗೂ ಗಂಗೋಳಿಯಲ್ಲಿ ಎ.ಟಿ.ಎಂ. ಯಂತ್ರವನ್ನು ಅಳವಡಿಸಿದ್ದು ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ಹಾಗೂ ಹಾಂಗ್ಯೋ ಐಸ್ಕ್ರಿಮ್ ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರದೀಪ್ ಪೈ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಅಂಜುಮನ್ ಸಂಸ್ಥೆಯ ವಿಶ್ರಾಂತ ಪ್ರಾಂಶುಪಾಲ ಡಾ.ಸೈಯ್ಯದ್ ಝಮಿರುಲ್ಲಾ ಷರೀಪ್ ಹಾಗೂ ಮಂಗಳೂರು ವಲಯ ಎಕ್ಸಿಸ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಕ್ಲಸ್ಟರ್ ಹೆಡ್ ಸುರೇಶ್ ಬಿ. ಭಾಗವಹಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News