ಕದ್ರಿ ದೇವಸ್ಥಾನದ ರಜತ ಮುಖಮಂಟಪ ದ್ವಾರ ಉದ್ಘಾಟನೆ
ಮಂಗಳೂರು, ಜ.21: ಕದ್ರಿ ಶ್ರೀಮಂಜುನಾಥ ದೇವಸ್ಥಾನಕ್ಕೆ ಸುಮಾರು 24 ಲಕ್ಷ ರೂ. ವೌಲ್ಯದ 12 ಕೆ.ಜಿ. ತೂಕದ ರಜತ ಮುಖಮಂಟಪ ದ್ವಾರವನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಶನಿವಾರ ಸಮರ್ಪಿಸಿದರು.
ಕೆಲವು ತಿಂಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು ರಜತದ್ವಾರ ಅರ್ಪಿಸುವುದಾಗಿ ಸಂಕಲ್ಪಿಸಿದ್ದರು. ಅದರಂತೆ ನಗರದ ಸ್ವರ್ಣ ಜ್ಯುವೆಲ್ಲರ್ಸ್ ನಲ್ಲಿ 12 ಕೆ.ಜಿ. ತೂಕದ ಸುಂದರ ಕುಸುರಿಯುಳ್ಳ ಈ ರಜತದ್ವಾರ ನಿರ್ಮಾಣಗೊಂಡಿದ್ದು, ದೇವಳದ ಎದುರು ಬಾಗಿಲಿನ ಮುಖಮಂಟಪ ದ್ವಾರಕ್ಕೆ ಅಳವಡಿಸಲಾಗಿದೆ. ಶ್ರೀ ದೇವಳದ ಪ್ರ.ಅರ್ಚಕ ರಾಮಣ್ಣ ಪ್ರಾರ್ಥನಾ ವಿವಿಧಾನ ನೆರವೇರಿಸಿದರು.
ಈ ಸಂದರ್ಭ ಸಚಿವರ ಪತ್ನಿ ರಾಧಾ ದೇಶಪಾಂಡೆ, ಶ್ರೀ ದೇವಳದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ, ಕಾರ್ಯನಿರ್ವಹಣಾಕಾರಿ ನಿಂಗಯ್ಯ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ, ಕಾರ್ಪೊರೇಟರ್ ಅಶೋಕ್ ಡಿ.ಕೆ., ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ಉಪಸ್ಥಿತರಿದ್ದರು.