ಜ.28ರಂದು ಕೋಟಿ ಚನ್ನಯ ಜೋಡುಕರೆ ಕಂಬಳ ನಡೆಸಲು ಕಂಬಳ ಸಮಿತಿಯಿಂದ ತೀರ್ಮಾನ

Update: 2017-01-22 14:20 GMT

ಮೂಡುಬಿದಿರೆ , ಜ.22 : ಮೂಡುಬಿದಿರೆಯಲ್ಲಿ ಇಂದು ನಡೆದ  ಕಂಬಳ ಸಮಿತಿಯ ಮಹತ್ವದ ಸಭೆಯಲ್ಲಿ ಇದೇ ಶನಿವಾರ ಕೋಟಿ ಚನ್ನಯ ಜೋಡುಕರೆ ಕಂಬಳ ನಡೆಸಲು ನಿರ್ಧರಿಸಲಾಗಿದೆ .

ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂಬಳದ ಪರ ತೀರ್ಪು ಬಂದರೆ ವಿಜಯೋತ್ಸವ ಾಚರಿಸುವುದಾಗಿ ತೀರ್ಮಾನಿಸಲಾಗಿದೆ.

ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದಲ್ಲಿ ಕೋಣಗಳನ್ನು ಕೆರೆಗೆ ಇಳಿಸಿ ಪ್ರತಿಭಟನೆ ನಡೆಸಲಾಗುವುದು . 250 ಕೋಣ, 25 ಸಾವಿರ ಪ್ರತಿಭಟನಾಕಾರರನ್ನು  ಸೇರಿಸಿ  ಪ್ರತಿಭಟನೆ ನಡೆಸಲಾಗುವುದು ಎಂದು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News