ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

Update: 2017-01-23 14:26 GMT

ಕುಂದಾಪುರ, ಜ.23: ತಲ್ಲೂರು ಕೋಟೆಬಾಗಿಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಹೇಶ ಕೋಟೆಬಾಗಿಲು ಕೊಡುಗೆಯಾಗಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಟಿ.ರಮೇಶ, ತಲ್ಲೂರು ಗ್ರಾಪಂ ಅಧ್ಯಕ್ಷ ಆನಂದ ಬಿಲ್ಲವ, ಸದಸ್ಯರಾದ ಸುನೀಲ್ ಖಾರ್ವಿ, ಚಂದ್ರಮತಿ ಡಿ.ಹೆಗ್ಡೆ, ಜೈ ಕರ್ನಾಟಕ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸುಧೀರ್, ಕೆ.ಕೆ.ವೈ. ಸ್ಟಾರ್ಸ್‌ನ ಪ್ರಶಾಂತ, ಯಕ್ಷಗಾನ ಗುರು ಎಚ್.ರಾಮಚಂದ್ರ ಭಟ್, ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ವಿಠಲ ಕಾಮತ್ ಸ್ವಾಗತಿಸಿದರು. ಸಹಶಿಕ್ಷಕಿ ಜೂಲಿ ಯನ್ ಡಾಯಸ್ ವಂದಿಸಿದರು. ಶಾಲಾ ನಾಯಕ ವಜ್ರೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News