×
Ad

ಕಂಬಳದ ನಿಷೇಧ ತೆರವಿನ ಬಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದೇನು ?

Update: 2017-01-24 20:35 IST

ಮಂಗಳೂರು, ಜ.24 :  ತಮಿಳುನಾಡು ಸರ್ಕಾರ  ಕೈಗೊಂಡ ಕ್ರಮಗಳ ರೀತಿಯಲ್ಲೇ ಕರ್ನಾಟಕವೂ  ಕಂಬಳದ ವಿಷಯದಲ್ಲಿ ಪ್ರಯತ್ನಿಸಿದರೆ ಕೇಂದ್ರ ಸರ್ಕಾರ ಅದಕ್ಕೆ ಸ್ಪಂದಿಸಲಿದೆ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ.

ಕಂಬಳದ ಬಗ್ಗೆ ಕೋರ್ಟ್  ತಡೆಯಾಜ್ಞೆ ಹಿನ್ನೆಲೆಯಲ್ಲಿ ಪ್ರಕರ್ತರ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದರು.

ಸ್ಥಳೀಯ ಜನಪದ ಆಚರಣೆಗಳ ಬಗ್ಗೆ ಕೇಂದ್ರ ಸರಕಾರ ಗೌರವ ಹೊಂದಿದೆ .  ಕರ್ನಾಟಕದ ಕಂಬಳದ ಬಗ್ಗೆ ಮೋದಿ ಸರಕಾರ ಗೌರವ ಇರಿಸಿದೆ. ಈ ಬಗ್ಗೆ ರಾಜ್ಯ ಸರಕಾರ ಕೈಗೊಳ್ಳುವ ನಿರ್ಣಯಕ್ಕೆ ಕೇಂದ್ರ ಸರಕಾರ ಮುಕ್ತವಾಗಿ ಸ್ಪಂದಿಸಲಿದೆ ಎಂದು ಅವರು ತಿಳಿಸಿದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News