×
Ad

ಕಲ್ಯಾಣಪುರದ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನೋತ್ತರ ರಜತ ಮಹೋತ್ಸವದ ಸಂಭ್ರಮ

Update: 2017-01-24 23:44 IST

ಉಡುಪಿ, ಜ.24: ಕಲ್ಯಾಣಪುರ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ತರ ರಜತಮಹೋತ್ಸವ (150) ವರ್ಷದ ಸಂಭ್ರಮಾಚರಣೆ ಯಲ್ಲಿದ್ದು, ಇದರ ಉದ್ಘಾಟನಾ ಸಮಾರಂಭ ಇದೇ ಜ.27ರಂದು ಶುಕ್ರವಾರ ಕಲ್ಯಾಣಪುರ ಮಿಲಾಗ್ರಿಸ್ ಚರ್ಚ್ ಸಭಾಭವನದಲ್ಲಿ ಜರುಗಲಿದೆ ಎಂದು ಶಾಲೆಯ ಸಂಚಾಲಕ  ವಂ. ಸ್ಟ್ಯಾನಿ ಬಿ. ಲೋಬೊ ತಿಳಿಸಿದ್ದಾರೆ.

   ಮಂಗಳವಾರ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ ಚರ್ಚಿನ ಅಧೀನ ಸಂಸ್ಥೆಯಾದ ಈ ಶಾಲೆ, 19ನೇ ಶತಮಾನದಲ್ಲಿ ಕಲ್ಯಾಣಪುರ ಪರಿಸರದ ಜನರನ್ನು ಅಕ್ಷರಸ್ಥರನ್ನಾಗಿ ಮಾಡಲು ಮಿಲಾಗ್ರಿಸ್ ಚರ್ಚಿನಲ್ಲಿ ಅಂದಿನ ಧರ್ಮಗುರುಗಳು ಆರಂಭಿಸಿದ ‘ಬೊಲ್ಕಾಂವ್ ಇಸ್ಕೊಲ್’ ಎಂದು ಪ್ರಸಿದ್ಧಿ ಪಡೆದಿತ್ತು ಎಂದರು.

ಬಳಿಕ ವಂ. ಧರ್ಮಗುರು ಆಲ್ಬರ್ಟ್ ಡಿಸೋಜಾರ ದೂರದರ್ಶಿತ್ವದ ಫಲವಾಗಿ 1892 ರಲ್ಲಿ ಸಂತ ಜೋಸೆಫ್ ಶಾಲೆಯೆಂದು ಸರಕಾರದಿಂದ ಶಾಶ್ವತ ಅನುದಾನಿತ ಶಾಲೆಯಾಗಿ ಮಾನ್ಯತೆ ಪಡೆಯಿತು. ಪ್ರಸ್ತುತ ಸುಮಾರು 350 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ, ಕನ್ನಡ ಮಾಧ್ಯಮ ಶಾಲೆಗಳು ಅವಸಾನದ ಅಂಚಿಗೆ ಸರಿಯುತ್ತಿರುವ ದಿನದಲ್ಲೂ ಪರಿಸರದ ಜನತೆಯ ವಿಶ್ವಾಸ ಗಳಿಸಿ ಬ್ರಹ್ಮಾವರ ಶೈಕ್ಷಣಿಕ ವಲಯದಲ್ಲೇ ಅಧಿಕ ಸಂಖ್ಯೆಯ ಮಕ್ಕಳಿರುವ ಕನ್ನಡ ಮಾಧ್ಯಮ ಶಾಲೆ ಎಂಬ ಪ್ರಖ್ಯಾತಿ ಗಳಿಸಿದೆ ಎಂದರು.

ಶತಮಾನೋತ್ತರ ರಜತ ಮಹೋತ್ಸವ ವರ್ಷದ ಸವಿ ನೆನಪಿಗಾಗಿ ಹಾಗೂ ಮಕ್ಕಳ ಅನುಕೂಲತೆಗಾಗಿ ಹೊಸಕಟ್ಟಡದ ನಿರ್ಮಾಣ ಕಾರ್ಯ, ಕಂಪ್ಯೂಟರ್ ಕೊಠಡಿ, ಸ್ಮಾರ್ಟ್ ತರಗತಿಗಳ ನವೀಕರಣ, ಶಾಲಾ ವಾಚನಾಲಯ ಮತ್ತು ಪ್ರಯೋಗ ಶಾಲೆಯ ಆಧುನಿಕರಣ, ಹಾಗೂ ಅತಿಥಿ ಶಿಕ್ಷಕರ ಸಂಭಾವನೆಗಾಗಿ ಶಾಶ್ವತ ನಿಧಿಯನ್ನು ಸ್ಥಾಪಿಸುವ ಯೋಜನೆಯನ್ನು ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದೆ.

ಶತಮಾನೋತ್ತರ ರಜತ ಮಹೋತ್ಸವ ವರ್ಷದ ಸವಿ ನೆನಪಿಗಾಗಿ ಹಾಗೂ ಮಕ್ಕಳ ಅನುಕೂಲತೆಗಾಗಿ ಹೊಸಕಟ್ಟಡದ ನಿರ್ಮಾಣ ಕಾರ್ಯ, ಕಂಪ್ಯೂಟರ್ ಕೊಠಡಿ, ಸ್ಮಾರ್ಟ್ ತರಗತಿಗಳ ನವೀಕರಣ, ಶಾಲಾ ವಾಚನಾಲಯ ಮತ್ತು ಪ್ರಯೋಗ ಶಾಲೆಯ ಆಧುನೀಕರಣ,  ಅತಿಥಿ ಶಿಕ್ಷಕರ ಸಂಭಾವನೆಗಾಗಿ ಶಾಶ್ವತ ನಿಧಿಯನ್ನು ಸ್ಥಾಪಿಸುವ ಯೋಜನೆಯನ್ನು ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದೆ. ಶತಮಾನೋತ್ತರ ರಜತ ಮಹೋತ್ಸವ ವರ್ಷದ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಥೊಲಿಕ್ ಶಿಕ್ಷಣ ಮಂಡಳಿ ಉಡುಪಿ ಇದರ ಕಾರ್ಯದರ್ಶಿಗಳಾದ ವಂ. ಲಾರೆನ್ಸ್ ಡಿಸೋಜ ವಹಿಸಲಿದ್ದು, ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಬ್ರಹ್ಮಾವರ ವಲಯ ನಾಗೇಶ್ ಶ್ಯಾನುಭೋಗ್ ಮುಖ್ಯ ಅತಿಥಿಯಾಗಿ ಆಗಮಿಸಿಲಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷ ಡಾ. ನೇರಿ ಕರ್ನೆಲಿಯೊ, ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ಸುಶೀಲ ಮೊಂತೆರೊ, ಹಳೆ ವಿದ್ಯಾರ್ಥಿಗಳಾದ ಬ್ಯಾಪ್ಟಿಸ್ಟ್ ಡಯಾಸ್, ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News