ಜ.28ರಿಂದ ಉಡುಪಿಯಲ್ಲಿ ಫಲಪುಷ್ಪ ಪ್ರದರ್ಶನ

Update: 2017-01-24 18:48 GMT

ಉಡುಪಿ, ಜ.24: ಉಡುಪಿ ಜಿಲ್ಲಾ ಮಟ್ಟದ 2016-17ನೆ ಸಾಲಿನ ತೋಟಗಾರಿಕೆ ಲಪುಷ್ಪ ಪ್ರದರ್ಶನ, ಸಾವಯವ ಸಿರಿಧಾನ್ಯ ಮೇಳ ಮತ್ತು ರೈತ ಸೇವಾ ಕೇಂದ್ರಗಳ ಉದ್ಘಾಟನೆ ಜ.28ರಿಂದ 30ರವರೆಗೆ ದೊಡ್ಡಣಗುಡ್ಡೆಯಲ್ಲಿರುವ ತೋಟಗಾರಿಕಾ ಇಲಾಖೆಯ ಪುಷ್ಪಹರಾಜು ಕೇಂದ್ರದ ಆವರಣದಲ್ಲಿ ನಡೆಯಲಿದೆ.

ಜ.28ರಿಂದ ಮೂರು ದಿನಗಳ ಕಾಲ ನಡೆಯಲಿರುವ ಲಪುಷ್ಟ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳದಲ್ಲಿ 3,000 ಗುಲಾಬಿ ಹೂಗಳು ಹಾಗೂ 1,000 ಜರ್ಬೆರಾ ಹೂವಿನಿಂದ ಅಲಂಕರಿಸಿದ ಯಕ್ಷಗಾನ ಕಿರೀಟದ ಮಾದರಿ, ಮಕ್ಕಳಲ್ಲಿ ತೋಟಗಾರಿಕೆ ಆಸಕ್ತಿ ಮೂಡಿಸಲು 1,000 ಆರ್ಕಿಡ್ ಹಾಗೂ 800 ಆಲ್‌ಸ್ಟ್ರೋಮೆರಿಯಾ ಹೂಗಳಿಂದ ಚೋಟಾ ಭೀಮ್ ಕುಟುಂಬದ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ ನಾಯ್ಕೋ ಸುದ್ದಿಗಾರರಿಗೆ ತಿಳಿಸಿದ್ದಾರೆ. ತಾರಸಿ ತೋಟ ಮತ್ತು ಕೈತೋಟ, 19 ಪುಷ್ಪಜಾತಿಯ 11,000 ಸಾವಿರ ಗಿಡಗಳನ್ನು ಕುಂಡಗಳಲ್ಲಿ ಹಾಗೂ ಪಾಲಿಬ್ಯಾಗ್‌ಗಳಲ್ಲಿ ವಿವಿಧ ಮಾದರಿಯಲ್ಲಿ ಜೋಡಣೆ, 9,000 ಗುಲಾಬಿ ಹೂಗಳಿಂದ ಅಲಂಕರಿಸಲ್ಪಟ್ಟ ಕಾಪು ದೀಪ ಸ್ತಂಭದ ಮಾದರಿ ಪ್ರದರ್ಶನದ ಆಕರ್ಷಣೆಯಾಗಲಿದೆ. ನವಧಾನ್ಯದಿಂದ ಅಲಂಕರಿಸಲ್ಪಟ್ಟ ನಂದಿ, ಶಾವಿಗೆಯಲ್ಲಿ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡರ ಮೂರ್ತಿ, ತರಕಾರಿಗಳಲ್ಲಿ ವಿವಿಧ ಪ್ರಾಣಿ ಹಾಗೂ ಕಲಾಕೃತಿಗಳ ಕೆತ್ತನೆ ಪ್ರದರ್ಶನಗೊಳ್ಳಲಿದೆ ಎಂದವರು ವಿವರಿಸಿದರು.

 ಇಲಾಖಾ ಮಳಿಗೆಗಳಲ್ಲಿ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ರೈತ ಸೇವಾ ಕೇಂದ್ರದ ಮಳಿಗೆಗಳಲ್ಲಿ ವಿವಿಧ ವಿಚಾರಗಳ ಮಾಹಿತಿ ಹಾಗೂ ವಸ್ತುಗಳ ಮಾರಾಟ, ಸಾವಯವ ವಸ್ತುಗಳ ಪ್ರದರ್ಶನ, ಆಹಾರ ಮಳಿಗೆಗಳು, ಸಿರಿಧಾನ್ಯಗಳ ಪ್ರದರ್ಶನ, ಸಮಗ್ರ ಜಲಾನಯನ ಮಾದರಿ, ಕೃಷಿ ಉಪಕರಣಗಳ ಮಾದರಿ ಹಾಗೂ 3 ದಿನಗಳ ಕಾಲ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ವಿವಿಧ ವಿಚಾರಗಳ ಬಗ್ಗೆ ರೈತರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ವಿಚಾರಸಂಕಿರಣಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಭುವನೇಶ್ವರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ ನಾಯ್ಕಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News