ಹವಾಲ್ದಾರ್ ಹಂಗಪನ್ ದಾದಾ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ಪ್ರದಾನ
Update: 2017-01-26 10:30 IST
ಹೊಸದಿಲ್ಲಿ, ಜ.26: ರಾಜಧಾನಿ ದಿಲ್ಲಿಯಲ್ಲಿ 68ನೆ ಗಣರಾಜ್ಯೋತ್ಸವದ ಅಂಗವಾಗಿ ಇಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ರಾಜ್ ಪಥ್ ನಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಭಯೋತ್ಪಾಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮ ರಾಗಿದ್ದ ಹವಾಲ್ದಾರ ಹಂಗಪನ್ ದಾದಾ ಅವರಿಗೆ ಇದೇ ಸಂದರ್ಭದಲ್ಲಿ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರದಾನ ಮಾಡಿದರು. ಹಂಗ ಪನ್ ದಾದಾ ಪತ್ನಿ ಚೇಸನ್ ಲೊವಾಂಗ್ ದಾದಾ ಪ್ರಶಸ್ತಿ ಸ್ವೀಕರಿಸಿದರು.