ದುಬೈಯಲ್ಲಿ ವಾಹನಅಪಘಾತ: ಇಬ್ಬರು ಭಾರತೀಯರ ಸಾವು
Update: 2017-01-26 17:44 IST
ದುಬೈ,ಜ.26: ಅಲ್ಲಿಸೈಲಿಯದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಇಬ್ಬರು ಕೇರಳೀಯ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಮಲಪ್ಪುರಂನ ವಳವನ್ನೂರ್ ಅಬ್ದುಲ್ ಮಜೀದ್(21), ವಳಂಚೇರಿಯ ಶಂಸುದ್ದೀನ್ ಪಾಲಕ್ಕಲ್(42) ಮೃತರಾದ ದುರ್ದೈವಿಗಳು.
ಬುಧವಾರ ರಾತ್ರೆ 9 ಗಂಟೆಗೆ ಅಪಘಾತ ಸಂಭವಿಸಿದೆ. ಅಲ್ ಲಿಸೈಲಿಯದ ಕುದರೆ ಸಾಕಣೆ ಕೇಂದ್ರದಲ್ಲಿ ಇವರು ಉದ್ಯೋಗದಲ್ಲಿದ್ದರು ಎಂದು ವರದಿತಿಳಿಸಿದೆ.