ಕುದ್ರೋಳಿ: ಜ.28ರಂದು ಯುನಿವೆಫ್ನಿಂದ ಪ್ರವಾದಿ ಅಭಿಯಾನ
Update: 2017-01-27 12:22 IST
ಮಂಗಳೂರು, ಜ.27: ‘ಭಾರತದಲ್ಲಿ ನಾಗರಿಕ ಕಾನೂನು ಹಾಗೂ ಸಾಮಾಜಿಕ ನ್ಯಾಯ ಮತ್ತು ಪ್ರವಾದಿ ಮುಹಮ್ಮದ್(ಸ.)’ಎಂಬ ಕೇಂದ್ರೀಯ ವಿಷಯದಲ್ಲಿ 2016ರ ಡಿಸೆಂಬರ್ 16ರಿಂದ 2017ರ ಫೆಬ್ರವರಿ 3ರ ತನಕ ಯುನಿವೆಫ್ ಕರ್ನಾಟಕ ಆಯೋಜಿಸಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಎಂಬ ಅಭಿಯಾನದ ಪ್ರಯುಕ್ತ ಜ.28ರಂದು ರಾತ್ರಿ 8ಕ್ಕೆ ಕುದ್ರೋಳಿ-1 ಭಾಗ್ ನಲ್ಲಿ ಸಾರ್ವಜನಿಕ ಸಭೆ ಜರಗಲಿದೆ.
ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ಶರೀಅತ್ ನಮ್ಮ ಕಾನೂನು ಪ್ರವಾದಿ(ಸ.) ನಮ್ಮ ನಾಯಕ’ ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ಕುದ್ರೋಳಿ ಶಾಖಾಧ್ಯಕ್ಷ ಹುದೈಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.