×
Ad

ಕಾಸರಗೋಡು : ಖಾಸಗಿ ಬಸ್ಸು ಮಾಲಕರ ಅನಿರ್ದಿಷ್ಟಾವಧಿ ಮುಷ್ಕರ ಹಿಂದೆಗೆತ

Update: 2017-01-27 22:22 IST

ಕಾಸರಗೋಡು , ಜ.27  : ಪ್ರಯಾಣ ದರ ಏರಿಕೆ  ಸೇರಿದಂತೆ ಹಲವು ಬೇಡಿಕೆಗಳನ್ನು   ಮುಂದಿಟ್ಟು ಕೊಂಡು ಖಾಸಗಿ ಬಸ್ಸು ಮಾಲಕರು  ಫೆಬ್ರವರಿ 2ರಿಂದ   ನಡೆಸಲುದ್ದೇಶಿಸಿದ್ದ  ಅನಿರ್ಧಿಷ್ಟಾವಧಿ ಮುಷ್ಕರವನ್ನು  ಹಿಂದೆಗೆದುಕೊಂಡಿದ್ದಾರೆ. 

ಈ ಬಗ್ಗೆ ಶುಕ್ರವಾರ ಸಂಜೆ  ಕೇರಳ ಸಾರಿಗೆ ಸಚಿವ ಎ. ಕೆ  ಶಶೀ೦ದ್ರನ್  ರವರು ಬಸ್ಸು ಮಾಲಕರ ರಾಜ್ಯ ಸಂಘದ ಮುಖಂಡರ ಜೊತೆ ನಡೆಸಿದ ಮಾತುಕತೆ ಯಲ್ಲಿ  ಈ ತೀರ್ಮಾನ ತೆಗೆದುಕೊಳ್ಳಲಾಯಿತು .

ಪ್ರಯಾಣ ದರ ಏರಿಕೆ ಸೇರಿದಂತೆ ಮಾಲಕರ ಎಲ್ಲಾ ಬೇಡಿಕೆಗಳ ಬಗ್ಗೆ  ಅಧ್ಯಯನ ನಡೆಸಲು ಜಸ್ಟಿಸ್ ರಾಮಚಂದ್ರನ್ ಆಯೋಗ ನೇಮಿಸಲು  ವರದಿ ಲಭಿಸಿದ ಬಳಿಕ ಬೇಡಿಕೆ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ಲಭಿಸಿದ ಹಿನ್ನಲೆಯಲ್ಲಿ ಮುಷ್ಕರ ಹಿಂದೆಗೆದುಕೊಳ್ಳಲಾಯಿತು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News