ಕಂಬಳ ಮೇಲಿನ ನಿಷೇಧ ತೆರವುಗೊಳಿಸಿ: ಬಳಕೆದಾರರ ವೇದಿಕೆ

Update: 2017-01-28 18:43 GMT

ಮಂಗಳೂರು, ಜ.28: ಕಂಬಳ ತುಳುನಾಡಿನ ಜನಪ್ರಿಯ ಕ್ರೀಡೆಯಾಗಿದ್ದು, ಈ ಪಾರಂ ಪರಿಕ ಕ್ರೀಡೆಯ ಮೇಲಿನ ನಿಷೇಧವನ್ನು ಕೂಡಲೇ ಹಿಂಪಡೆಯಬೇಕೆಂದು ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆಯ ಅಧ್ಯಕ್ಷ ವಿಶ್ವನಾಥ್ ಕೆ.ಬಿ. ಆಗ್ರಹಿಸಿ ದ್ದಾರೆ.

800 ವರ್ಷಗಳ ಇತಿಹಾಸ ಇರುವ ಕಂಬಳದ ಮೇಲಿನ ನಿಷೇಧವನ್ನು ತೆರವುಗೊಳಿಸಲು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ರಾಜಕೀಯ ಹಿತಾಸಕ್ತಿ ಮರೆತು ಪ್ರಯತ್ನಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ದ.ಕ. ಜಿಲ್ಲೆಯ ನಾಗರಿಕರು ಪಕ್ಷಭೇದ ಮರೆತು ಕಂಬಳ ಮೇಲಿನ ನಿಷೇಧ ತೆರವುಗೊಳಿಸುವ ಹೋರಾಟದಲ್ಲಿ ಭಾಗವಹಿಸಬೇಕೆಂದು ಅವರು ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News