ಬಿಜೆಪಿ ಸರಕಾರ ಮೊಗಲರಂತೆ ವರ್ತಿಸುತ್ತಿದೆ: ಸಾಮ್ನಾ

Update: 2017-01-29 11:50 GMT

ಮುಂಬೈ,ಜ. 29: ಬಿಜೆಪಿಸರಕಾರ ಮೊಗಲರಂತೆ ವರ್ತಿಸುತ್ತಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಕಟುವಾಗಿ ಟೀಕಿಸಿದೆ. ಹಿಂದುತ್ವವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದೆ.ಹಿಂದುತ್ವ, ರಾಮಮಂದಿರದ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇವೆರಡನ್ನೂ ಮರೆತಿದ್ದಾರೆಂದು ಸಾಮ್ನಾ ಆರೋಪಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರಕಾರ ಕಚೇರಿ, ಶಾಲೆಗಳಿಂದ ದೇವರುಗಳ ಫೋಟೊಗಳನ್ನು ತೆಗೆಸಬೇಕೆಂದು ಸುತ್ತೋಲೆ ಹೊರಡಿಸಿತ್ತು. ಇದು ಸಾಮ್ನಾದ ಕೋಪಕ್ಕೆ ಕಾರಣವೆನ್ನಲಾಗಿದ್ದು. ಶಿವಸೇನೆಯ ಸಚಿವರು ಬಲವಾಗಿ ವಿರೋಧಿಸಿದ್ದರಿಂದ ಸುತ್ತೋಲೆಯನ್ನು ಫಡ್ನವೀಸ್ ರದ್ದುಪಡಿಸಿದ್ದರು.

ಛತ್ರಪತಿ ಶಿವಾಜಿ ಹಿಂದೂಗಳನ್ನು ಸಂರಕ್ಷಿಸಿ ಧರ್ಮವನ್ನು ರಕ್ಷಿಸಿದ್ದಾನೆ. ಮಹಾನ್ ರಾಜ ರಾಜಕೀಯಕ್ಕಾಗಿ ದೇವರುಗಳನ್ನು ಮರೆಯಲಿಲ್ಲ ಎಂದು ಸಾಮ್ನಾ ಹೇಳಿದೆ. ಮೊಗಲರಿಂದ ಹಿಂದೂ ದೇವರುಗಳನ್ನುಶಿವಾಜಿ ರಕ್ಷಿಸಿದನು. ಆದರೆ ಇಂದಿನ ಬಿಜೆಪಿ ಸರಕಾರ ಮೊಗಲರಂತೆ ಹಿಂದೂ ದೇವರುಗಳನ್ನು ಆಕ್ರಮಿಸುತ್ತಿದೆ ಎಂದು ಸಾಮ್ನಾ ಆರೋಪಿಸಿದೆ.

ಕಾಶ್ಮೀರಿ ಪಂಡಿತರ ಸಂರಕ್ಷಣೆಗೆ ಸರಕಾರ ಶ್ರಮಿಸುವುದಿಲ್ಲ. ಬದಲಾಗಿ ಮೆಹಬೂಬ ಮುಫ್ತಿಗೆ ಆರತಿ ಎತ್ತುತ್ತಿದೆ ಎಂದು ಸಾಮ್ನಾ ಆಪಾದಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News