ದಿನಸಿ ಅಂಗಡಿಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

Update: 2017-01-31 18:25 GMT

ಕುಂದಾಪುರ, ಜ.31: ಇಲ್ಲಿನ ಹಳೆ ಬಸ್ ನಿಲ್ದಾಣದ ಸಮೀಪದ ನಾಯಕ್ ಸ್ಟೋರ್ಸ್‌ ದಿನಸಿ ಅಂಗಡಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಘಟನೆ ನಡೆದಿದೆ.

ಅಂಗಡಿಯ ಮಾಲಕ ನಾಗೇಶ್ ನಾಯಕ್ ರಾತ್ರಿ 8:30ರ ಸುಮಾರಿಗೆ ಬಾಗಿಲು ಹಾಕಿ ಮನೆಗೆ ತೆರಳಿದ್ದರು. ರಾತ್ರಿ 10ಗಂಟೆ ಸುಮಾರಿಗೆ ಅಂಗಡಿ ಒಳಗಿನಿಂದ ಹೊಗೆ ಕಾಣಿಸಿಕೊಂಡಿತು. ಇದನ್ನು ನೋಡಿದ ಸ್ಥಳೀಯರು ಕೂಡಲೇ ಕುಂದಾಪುರ ಅಗ್ನಿ ಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ ಬೆಂಕಿ ಇಡೀ ಅಂಗಡಿಯನ್ನು ವ್ಯಾಪಿಸಿದ್ದು. ಪರಿಣಾಮ ಬಹುತೇಕ ದಿನಸಿ ಸಾಮಾನುಗಳು ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ನಿರಂತರ 2 ಗಂಟೆಗಳ ಶ್ರಮದಿಂದ ಬೆಂಕಿಯನ್ನು ನಂದಿಸಲಾಯಿತು. ಈ ಅಗ್ನಿ ಆಕಸ್ಮಿಕಕ್ಕೆ ಅಂಗಡಿಯೊಳಗೆ ಉಂಟಾಗಿರುವ ಶಾರ್ಟ್ ಸರ್ಕ್ಯುಟ್ ಕಾರಣ ಎನ್ನಲಾಗಿದೆ. ಇದರಿಂದ ಸುಮಾರು 10-15ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News