×
Ad

ಜಾನುವಾರ ಸಾಗಾಟಗಾರರ ಮೇಲೆ ಸಂಘ ಪರಿವಾರದ ಕಾರ್ಯಕರ್ತರಿಂದ ಹಲ್ಲೆ: ಆರೋಪ

Update: 2017-02-01 20:16 IST

ಬಂಟ್ವಾಳ , ಫೆ.1 :  ಬಾಳ್ತಿಲ ಗ್ರಾಮದ ನೀರಪಾದೆಯ  ಕಾಂದಿಲ ಎಂಬಲ್ಲಿ ಪಿಕಪ್ ನಲ್ಲಿ  ಸಾಗಿಸುತ್ತಿದ್ದ ಜಾನುವಾರುಗಳನ್ನು ಸಂಘಪರಿವಾರದ ಕಾರ್ಯಕರ್ತರು ಪತ್ತೆ ಹಚ್ಚಿ ಚಾಲಕ ಮತ್ತು ಕ್ಲೀನರ್ ಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದವರನ್ನು ಚಾಲಕ ಅಡ್ಯಾರ್ ನ ಸಾದಿಕ್ ಹಾಗೂ ಕ್ಲೀನರ್ ಸಂಜಯ ಡಿಸೋಜ ಎಂದು ಗುರುತಿಸಲಾಗಿದೆ.

ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ಆರೋಪಿಗಳು ಪಿಕಪ್ ನ್ನು ತಡೆಗಟ್ಟಿ ,  ಚಾಲಕ ಮತ್ತು ಕ್ಲೀನರ್ ಗೆ  ಥಳಿಸಿ ಬಂಟ್ವಾಳ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಎಂದು ತಿಳಿದು ಬಂದಿದೆ .

ಈ ಸಂದರ್ಭ ಕೆಲ ಹೊತ್ತು ಆತಂಕದ ವಾತಾವರಣವು ಉಂಟಾಗಿತ್ತೆನ್ನಲಾಗಿದೆ.

ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರನ್ನು ಹಾಗೂ ಜಾನುವಾರು ಸಹಿತ ಪಿಕಪ್  ವಶಕ್ಕೆ ತೆಗೆದುಕೊಂಡಿದ್ದಾರೆ . 

ಜಾನುವಾರನ್ನು ನೀರಪಾದೆಯಿಂದ ನೀರುಮಾರ್ಗಕ್ಕೆ ಸಾಗಿಸಲಾಗುತ್ತಿತ್ತೆನ್ನಲಾಗಿದೆ.

ಅಕ್ರಮ ಜಾನುವಾರು ಸಾಗಾಟ ಎಂಬ ಆರೋಪದಡಿಯಲ್ಲಿ ಹಲ್ಲೆಗೊಳಗಾದ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಹಾಗೂ ಹಲ್ಲೆ ನಡೆಸಿದ ಅಪರಿಚಿತರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News