ಗೃಹಿಣಿಯ ಮೃತದೇಹ ಪತ್ತೆ: ಪತಿ, ಮಗ ವಶಕ್ಕೆ

Update: 2017-02-01 18:11 GMT

ಕಾಸರಗೋಡು, ೆ.1: ಗೃಹಿಣಿಯೋರ್ವರ ಮೃತದೇಹ ಮನೆ ಸಮೀಪದ ಪೊದೆಯೊಂದರಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕುಂಬಳೆ ಪೊಲೀಸರು ಪತಿ ಮತ್ತು ಪುತ್ರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ .

  ಮೃತಪಟ್ಟವರನ್ನು ಕುಂಬಳೆ ಸಮೀಪದ ನಾಯ್ಕಪು ದರ್ಬಾರ್ ಕಟ್ಟೆಯ ನಾರಾಯಣ ಎಂಬವರ ಪತ್ನಿ ಸುಶೀಲಾ(42) ಎಂದು ಗುರುತಿಸಲಾಗಿದೆ. ನಾಯ್ಕಿಪು  ದರ್ಬಾರ್ ಕಟ್ಟೆ ರಸ್ತೆ ಬದಿಯ ಗೇರು ಮರದ ಬುಡದ ಪೊದೆಯಲ್ಲಿ ಬುಧವಾರ ಮಧ್ಯಾಹ್ನ ಸುಶೀಲಾ ಮೃತದೇಹ ಕುತ್ತಿಗೆಗೆ ಸೀರೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂಶಯ ಉಂಟಾದ ಹಿನ್ನೆಲೆಯಲ್ಲಿ ಪತಿ ನಾರಾಯಣ ಮತ್ತು ಪುತ್ರ ಉದಯನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸುಶೀಲಾ ನಾಪತ್ತೆಯಾಗಿದ್ದು ಶೋಧ ನಡೆಸಿದಾಗ ಮರವೊಂದರಲ್ಲಿ ನೇಣು ಬಿಗಿದಿರುವುದು ಕಂಡುಬಂದಿದ್ದು, ತಾವೇ ಕೆಳಗಿಳಿಸಿದ್ದಾಗಿ ಪೊಲೀಸ್ ವಶದಲ್ಲಿರುವ ನಾರಾಯಣ ಮತ್ತು ಉದಯ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

ಆದರೆ ಇದನ್ನು ಪೊಲೀಸರು ತಳ್ಳಿ ಹಾಕಿದ್ದು, ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News