ಫೆ.5: ಉಡುಪಿ ತುಳುಕೂಟದಿಂದ ತುಳು ಗೀತೆ ಗಾಯನ ಸ್ಪರ್ಧೆ

Update: 2017-02-01 18:17 GMT

ಉಡುಪಿ, ಫೆ.1: ಉಡುಪಿಯ ತುಳುಕೂಟದ ಆಶ್ರಯದಲ್ಲಿ ದಿ. ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ 22ನೆ ವರ್ಷದ ತುಳುಗೀತೆ ಗಾಯನ ಸ್ಪರ್ಧೆಯನ್ನು ಫೆ.5ರಂದು ಬೆಳಗ್ಗೆ 9ಕ್ಕೆ ಉಡುಪಿಯ ಕ್ರಿಶ್ಚಿಯನ್ ಪ್ರೌಢಶಾಲೆ ಎದುರಿನ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ. ಭಾವಗೀತೆ ಸ್ಪರ್ಧೆಯು 1ರಿಂದ 7ನೆ ತರಗತಿಯ ವಿದ್ಯಾರ್ಥಿಗಳಿಗೆ ಕಿರಿಯ ವಿಭಾಗದಲ್ಲಿ, 8ರಿಂದ 10ನೆ ತರಗತಿಯ ವಿದ್ಯಾರ್ಥಿಗಳು ಪ್ರೌಢವಿಭಾಗದಲ್ಲಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮುಕ್ತ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ. ಆಸಕ್ತರು ಪ್ರವೇಶಪತ್ರಗಳನ್ನು ಕಡ್ಡಾಯವಾಗಿ ಫೆ.3ರೊಳಗೆ ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ತುಳುಕೂಟ, ಜಗನ್ನಾಥ ಸಭಾಭವನ, ಮಿಷನ್ ಕಂಪೌಂಡ್, ಉಡುಪಿ-1 ಇವರಿಗೆ ತಲುಪಿಸಬಹುದು ಅಥವಾ ಸ್ಪರ್ಧಾ ಸಂಚಾಲಕ ವಿವೇಕಾನಂದ, ಶಿಕ್ಷಕರು, ಎಸ್‌ವಿಎಸ್ ಪ.ಪೂ.ಕಾಲೇಜು, ಕಟಪಾಡಿ ಇವರನ್ನು (ಮೊ: 9449367595) ಸಂಪರ್ಕಿಸುವಂತೆ ತುಳುಕೂಟದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News