×
Ad

ಸಾಲಿಗ್ರಾಮ ಪಪಂ ವಿರುದ್ಧ ಪತ್ರ ಬರೆದು ಆತ್ಮಹತ್ಯೆಗೆ ಯತ್ನ

Update: 2017-02-04 00:27 IST

ಸಾಲಿಗ್ರಾಮ, ೆ.3: ಸಾಲಿಗ್ರಾಮ ಪಪಂ ವಾಟರ್‌ಮ್ಯಾನ್ ಜಯರಾಜ್ ಎಂಬವರು ಶುಕ್ರವಾರ ಬೆಳಗ್ಗೆ ಮರಣಪತ್ರ ಬರೆದು ಮಾಬುಕಳ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಸ ಸೇತುವೆ ಮೇಲಿ ನಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮಂಜುಳಾ ಎಂಬ ದಲಿತ ಮಹಿಳೆಯೋವ

ರ್ರು ಕುಡಿಯುವ ನೀರು ಬರುತ್ತಿಲ್ಲ ಎಂಬುದಾಗಿ ಸಾಲಿಗ್ರಾಮ ಪಪಂಗೆ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲಿಸಲು ವಾಟರ್‌ಮ್ಯಾನ್ ಜಯರಾಜ್ ಮಂಜುಳಾರ ಮನೆಗೆ ತೆರಳಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಸಾಲಿಗ್ರಾಮ ಪಪಂನ ಮಾಸಿಕ ಸಭೆಯಲ್ಲಿ ಕೆಲ ಸದಸ್ಯರು ಪ್ರಸ್ತಾಪಿಸಿ ವಾಟರ್‌ಮ್ಯಾನ್ ದಲಿತ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಾಕಾರಿ ಶ್ರೀಪಾದ್ ಭಟ್, ಜಯರಾಜ್‌ಗೆ ಶೋಕಾಸ್ ನೋಟಿಸ್ ನೀಡಿ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದ್ದರು. ಇದರಿಂದ ಮನನೊಂದ ಜಯರಾಜ್ ನನ್ನ ಸಾವಿಗೆ ಸಾಲಿಗ್ರಾಮ ಪಪಂ ಕಾರಣ ಎಂಬುದಾಗಿ ಮರಣಪತ್ರ ಬರೆದಿಟ್ಟು, ಕಿರಿಯ ಆರೋಗ್ಯ ಸಹಾಯಕಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ತನ್ನ ಸೈಕಲ್‌ನಲ್ಲಿ ಮಾಬುಕಳ ಸೇತುವೆಯ ಬಳಿ ಬಂದು ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದುಬಂದಿದೆ.

ವಿಚಾರ ತಿಳಿದು ಇತರ ಸದಸ್ಯರು ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸೇತುವೆ ಬಳಿ ತೆರಳಿ ಜಯರಾಜ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಹೊಳೆಯಲ್ಲಿ ನೀರಿಲ್ಲದ ಕಾರಣ ಜಯರಾಜ್ ಸೇತುವೆಯಿಂದ ಕೆಳಗೆ ಬಿದ್ದು ಕಾಲು ಮುರಿದುಕೊಂಡಿದ್ದು, ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News