ಕೊಣಾಜೆ : ಜಾನಪದ ದಿಬ್ಬಣ ಮೆರವಣಿಗೆಯ ಮೂಲಕ ಅಬ್ಬಕ್ಕ ಉತ್ಸವಕ್ಕೆ ಚಾಲನೆ
Update: 2017-02-04 19:45 IST
ಕೊಣಾಜೆ , ಫೆ. 4 : ಅಸೈಗೋಳಿಯಲ್ಲಿ ನಡೆಯುತ್ತಿರುವ ಅಬ್ಬಕ್ಕ ಉತ್ಸವ ಪ್ರಯುಕ್ತ ದೇರಳಕಟ್ಟೆಯಿಂದ ಅಸೈಗೋಳಿಯ ಉತ್ಸವ ವೇದಿಕೆಯವರೆಗೆ ಜಾನಪದ ದಿಬ್ಬಣ ಮೆರವಣಿಗೆ ವಿಜೃಂಭಣೆಯಿಂದ ಜರಗಿತು.
ಜಾನಪದ ದಿಬ್ಬಣದ ಉದ್ಘಾಟನೆಯನ್ನು ಸಚಿವ ಯು.ಟಿ.ಖಾದರ್ ಅವರು ನೆರವೇರಿಸಿದರು .
ಮೆರವಣಿಗೆಯು ಪೂರ್ಣಕುಂಭ ಕಲಶದೊಂದಿಗೆ, ಕೀಲು ಕುದುರೆ, ಕರಗಕುಣಿತ, ಗೊಂಬೆಗಳು, ಬ್ಯಾಂಡ್ಸೆಟ್, ಚೆಂಡೆ, ಕಂಗೀಲು, ಡೊಳ್ಳುಕುಣಿತ, ಪಟಕುಣಿತ, ವೀರಗಾಸೆ, ಸುಗ್ಗಿಕುಣಿತ, ಯಕ್ಷಗಾನ, ಹಾಲಕ್ಕಿ ಕುಣಿತ, ಸಂಸಾಲೆ ನೃತ್ಯ, ಅಬ್ಬಕ್ಕನ ಟ್ಯಾಬ್ಲೋದೊಂದಿಗೆ ಆಕರ್ಷಕವಾಗಿ ನಡೆಯಿತು.
ಬಳಿಕ ವೇದಿಕೆಯಲ್ಲಿ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.