×
Ad

ನೂತನ ಮಾರುಕಟ್ಟೆ ಕಾಮಗಾರಿಗೆ ಶಾಸಕ ಮೊಯ್ದಿನ್ ಬಾವಾ ಚಾಲನೆ

Update: 2017-02-06 21:45 IST

ಸುರತ್ಕಲ್, ಫೆ.6: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಟಿಪಳ್ಳ 6ನೇ ಬ್ಲಾಕ್‌ನಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದ ಮೊದಲ ಹಂತದ ನೂತನ ಮಾರುಕಟ್ಟೆ ಕಾಮಗಾರಿಗೆ ಮಂಗಳೂರು ಉತ್ತರ ವಲಯ ಶಾಸಕ ಮೊಯ್ದಿನ್ ಬಾವಾ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸದ್ಯ ಇರುವ 40.70 ಸೆಂಟ್ಸ್ ಸರಕಾರಿ ಜಾಗದಲ್ಲಿ ಸುಸಜ್ಜಿ ತ ಮಾರುಕಟ್ಟೆಗೆ 4 ಕೋಟಿ ರೂ. ಮಂಜೂರಾಗಿದೆ. ಅದರಲ್ಲಿ 1.5 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದ್ದು, 50 ಲಕ್ಷ ರೂ ಮೊತ್ತದ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

  ನೂತನ ಮಾರುಕಟ್ಟೆಯಲ್ಲಿ ಕೆಳ ಹಂತದ ನೆಲ ಮಹಡಿ, ಮೇಲು ಹಂತದ ನೆಲ ಮಹಡಿ ಮೊದಲನೇ ಮಹಡಿ ಮತ್ತು ಟೇರೆಸ್ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.

ಕೆಳ ಹಂತದ ನೆಲ ಮಹಡಿಯಲ್ಲಿ ಮಾಂಸಾಹಾರದ ಮಾರಾಟ ಮತ್ತು ಇತರ ಅಂಗಡಿಗಳನ್ನು ನಿರ್ಮಿಸಲಾಗುವುದು. ಅಲ್ಲದೆ, ಮೇಲಿನ ನೆಲ ಮಹಡಿಯಲ್ಲಿ ತರಕಾರಿ ಹಾಗೂ ಇತರ ಮಾರಾಟದ ಅಂಗಡಿಗಳಿಗೆ ನೀಡಲಾಗುವುದು ಎಂದರು.

   ಬಳಿಕ ಮಾತನಾಡಿದ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಶಾಸಕ ಮೊಯ್ದಿನ್ ಬಾವಾ ಅವರು ಅಭಿವೃದ್ಧಿ ಸಹಿಸಲಾಗದವರು ಸುರತ್ಕಲ್ ಪ್ರದೇಶದ ಅಭಿವೃದ್ಧಿಗೆ ತೊಡಕಾಗುತ್ತಿದ್ದಾರೆ. ಆದರೆ, ಶಾಸಕರ ಈ ಅವಧಿಯಲ್ಲಿ ಸುರತ್ಕಲ್ ಸಿಂಗಾಪುರ ಆಗುವುದರಲ್ಲಿ ಸಂಶಯ ಬೇಡ. ಅದರಂತೆಯೇ ಅದರ ಸುತ್ತಮುತ್ತಲಿನ ಪ್ರದೇಶಗಳಿಗೂ ಅನುದಾನಗಳನ್ನು ತರುವ ಮೂಲಕ ಅವುಗಳ ಅಭಿವೃದ್ಧಿಗೂ ಶಾಸಕರು ಶ್ರಮಿಸಬೇಕು ಎಂದರು.

ಇದೇ ಸಂದರ್ಭ ಕಾರ್ಪೊರೇಟರ್ ಅಯಾಝ್ ಮಾತನಾಡಿ, ಮಂಗಳೂರು ಉತ್ತರ ವಲಯದ ಅಭಿವೃದ್ಧಿಯ ವಿಚಾರದಲ್ಲಿ ಯಾವುದೆ ಶಕ್ತಿಗಳು ಅಡ್ಡಿ ಪಡಿಸಿದರೂ ಪಕ್ಷಾತೀತರಾಗಿ ಹೋರಾಟ ನಡೆಸಲು ಸಿದ್ಧರಿರುವುದಾಗಿ ತಿಳಿಸಿದರು.

 ಸಮಾರಂಭದಲ್ಲಿ ಲೆಕ್ಕಪತ್ರ ಸ್ಥಾಯೀ ಸಮಿತಿ ಅಧ್ಯಕ್ಷ ಬಶೀರ್ ಅಹ್ಮದ್, ಮಾಜೀ ಮೇಯರ್ ಗುಲ್ಝಾರ್ ಬಾನು, ಮಾಜೀ ಕಾರ್ಪೊರೇಟರ್ ಹರೀಶ್ ಸುರತ್ಕಲ್, ಜೆಇಗಳಾದ ದೇವರಾಜ್, ಅಬ್ದುಲ್ ಖಾದರ್, ಇಂಟೆಕ್ ನ ಸದಾಶಿವ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ವೈ. ರಾಘವೇಂದ್ರ ರಾವ್, ಗುತ್ತಿಗೆದಾರ ಜಲೀಲ್, ಶರೀಫ್ ಚೊಕ್ಕಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಸುರತ್ಕಲ್ ಭಾಗದ ಅಭಿವೃದ್ಧಿ ಸಹಿಸಲಾಗದ ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕಿಯ ಅಥವಾ ಆರೋಪಗಳಿಗೆ ಬೆದರುವುದಿಲ್ಲ. ಚುನಾವಣೆಯ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕಟಿಬದ್ಧನಾಗಿದ್ದೇನೆ.

ಶಾಸಕ ಮೊಯ್ದೀನ್ ಬಾವಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News