×
Ad

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2017-02-07 22:35 IST

ಕಾರ್ಕಳ, ಫೆ.7: ವೈಯಕ್ತಿಕ ಕಾರಣದಿಂದ ಮನನೊಂದ ಬಜಗೋಳಿ ಮುಡಾರು ನಿವಾಸಿ ಅಣ್ಣು ನಾಯಕ್ ಎಂಬವರ ಮಗ ಜಯರಾಮ ನಾಯ್ಕ್(21) ಎಂಬವರು ಇಂದು ಬೆಳಗ್ಗೆ ಮನೆಯ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರನಾರಾಯಣ: ಅಲ್ಬಾಡಿ ಗ್ರಾಮದ ತೊನ್ನಾಸೆ ನಿವಾಸಿ ಲಕ್ಷ್ಮಿ(52) ಎಂಬವರು ಫೆ.7ರಂದು ಬೆಳಗ್ಗೆ ಮನೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News