ಕರ್ನಲ್ ದಂಪತಿಗೆ ‘ಸೇವಾ ಭೂಷಣ ಪ್ರಶಸ್ತಿ’ ಪ್ರದಾನ
ಉಡುಪಿ, ಫೆ.8: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಎಸ್. ಗೋಪಾಲಕೃಷ್ಣರ ಸಂಸ್ಮರಣಾ ಪ್ರಯುಕ್ತ ನೀಡುವ ‘ಸೇವಾ ಭೂಷಣ ಪ್ರಶಸ್ತಿ’ ಯನ್ನು ಹಿರಿಯ ಸಮಾಜ ಸೇವಕ ದಂಪತಿ ಕರ್ನಲ್ ಬಿ.ರಾಮಚಂದ್ರ ರಾವ್ ಹಾಗೂ ಮಾಲತಿ ರಾವ್ ಅವರಿಗೆ ಇಂದು ಕಲಾರಂಗದ ಕಚೇರಿಯಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರ್ನಲ್ ಬಿ.ರಾಮಚಂದ್ರ ರಾವ್, ದೇಶದ ಪ್ರಗತಿ ನಮ್ಮ ಕೈಯಲ್ಲಿದೆ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜ ದಲ್ಲಿ ಶಾಂತಿ ಹಾಗೂ ತೃಪ್ತಿ ಗಳಿಸಬಹುದು. ಅದಕ್ಕಾಗಿ ನಾವು ಸಾಧಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ್ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆ ಯಿತು. ಎಸ್.ಗೋಪಾಲಕೃಷ್ಣರ ಸಂಸ್ಮರಣೆಯನ್ನು ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್ ಹಾಗೂ ಸುಬ್ರಹ್ಮಣ್ಯ ಬಾಸ್ರಿ ನೆರವೇರಿಸಿದರು. ಕಲಾರಂಗದ ಉಪಾಧ್ಯಕ್ಷ ಗಂಗಾಧರ್ ರಾವ್ ಉಪಸ್ಥಿತರಿದ್ದರು. ಅಧ್ಯಕ್ಷ ಗಣೇಶ್ ರಾವ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.