ಪ್ರಗತಿಪರ ಕೃಷಿಕ ಕೊರಗಪ್ಪ ನಿಧನ

Update: 2017-02-09 12:34 GMT

ಮೂಡುಬಿದಿರೆ, ಫೆ.9: ಕೆನರಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿ, ಪ್ರಗತಿಪರ ಕೃಷಿಕ ಕೊರಗಪ್ಪ ಎಸ್.(ಕೆ.ಎಸ್) ಪೂಜಾರಿ(72)ಅಲ್ಪ ಕಾಲದ ಅನಾರೋಗ್ಯದಿಂದಾಗಿ ಗುರುವಾರ ಮಾರ್ಪಾಡಿ ಗ್ರಾಮದ ಗಾಯತ್ರಿ ನಿವಾಸದಲ್ಲಿ ನಿಧನರಾದರು.

ಮುಂಬಯಿಯಲ್ಲಿ ಹಲವು ವರ್ಷ ಕೆನರಾ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದ್ದ ಅವರು ನಂತರ ಕೆನರಾ ಬ್ಯಾಂಕ್‌ನ ಕಿನ್ನಿಗೋಳಿ ಮತ್ತು ಎಡಪದವು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ನಿವೃತ್ತರಾಗಿದ್ದರು.

ನಿವೃತ್ತಿ ಬಳಿಕ ಹುಟ್ಟೂರು ಮಾರ್ಪಾಡಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡರು. ಪ್ರಗತಿಪರ ಕೃಷಿಕರಾಗಿದ್ದ ಅವರನ್ನು ಮಾರ್ಪಾಡಿ ರೈತ ಸಂಘದ ವತಿಯಿಂದ ಸನ್ಮಾನಿಸಲಾಗಿತ್ತು. ಅವರಿಗೆ ಪತ್ನಿ, ಇಬ್ಬರು ಪುತ್ರಿ ಹಾಗೂ  ಓರ್ವ ಪುತ್ರ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News