ಟೆಂಪೊ ಢಿಕ್ಕಿ: ಪಾದಚಾರಿ ಬಾಲಕ ಮೃತ್ಯು
Update: 2017-02-10 18:17 IST
ಕಡಬ, ಫೆ.10. ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಪದವು ಎಂಬಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಹಿಂದಿನಿಂದ ಟೆಂಪೊ ಗುದ್ದಿದ್ದರಿಂದಾಗಿ ಬಾಲಕ ಮೃತಪಟ್ಟ ಘಟನೆ ಶುಕ್ರವಾರದಂದು ನಡೆದಿದೆ.
ಉಪ್ಪಿನಂಗಡಿಯಿಂದ ಕಡಬ ಕಡೆಗೆ ಹೋಗುತ್ತಿದ್ದ ಕೋಳಿ ಸಾಗಾಟದ ಟೆಂಪೋ ಕುಂತೂರು ಪದವು ಹಾಲಿನ ಡೈರಿಗೆ ಹಾಲು ಹಾಕಲು ಹೋಗುತ್ತಿದ್ದ ಬಾಲಕನಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ಢಿಕ್ಕಿಯ ರಭಸಕ್ಕೆ ಕುಂತೂರು ಪದವು ಸೈಂಟ್ ಜಾರ್ಜ್ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಅಜೇಶ್ ರಸ್ತೆಯಿಂದ ಎಸೆಯಲ್ಪಟ್ಟು ತಲೆಗೆ ಗಂಭಿರವಾದ ಏಟು ಬಿದ್ದಿದ್ದು, ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಟೆಂಪೋ ಚಾಲಕ ಇರ್ಷಾದ್ ಹಾಗೂ ಸಹ ಸಹಸವಾರರಾದ ಜಬ್ಬಾರ್ ಹಾಗೂ ಮಿರ್ಷಾದ್ ರವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.