ಕೆಮ್ರಾಲ್ ಸ್ವಚ್ಚತಾ ಕಾರ್ಯಕ್ರಮ

Update: 2017-02-10 15:08 GMT

ಕಿನ್ನಿಗೋಳಿ,ಫೆ.10: ಕೆಮ್ರಾಲ್ ಪಂಚಾಯಿತಿ, ಶ್ರೀ ವಿನಾಯಕ ಮಿತ್ರ ಮಂಡಲಿ ಪಕ್ಷಿಕೆರೆ ಹಾಗೂ ಸಾರ್ವಜನಿಕರಿಂದ ಪಕ್ಷಿಕೆರೆ ಪೇಟೆಯನ್ನು ಪ್ಲಾಸ್ಟಿಕ್ ಮುಕ್ತ ವಲಯ ವನ್ನಾಗಿ ಮಾಡುವ ಉದ್ದೇಶದಿಂದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ ಅಂಚನ್, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಪಂಚಾಯಿತಿ ಸದಸ್ಯರಾದ ಸೇಸಪ್ಪ ಸಾಲ್ಯಾನ್, ಹರಿಪ್ರಸಾದ್, ಮಮತಾ ಪೂಜಾರ್ತಿ, ಪ್ರಮಿಳಾ ಶೆಟ್ಟಿ, ಜಯರಾಮ ಆಚಾರ್ಯ, ಪಿಡಿಒ ರಮೇಶ್ ರಾಥೋಡ್, ಕೇಶವ, ಉಮೇಶ್ ಪಂಜ, ಕಿರಣ್ ಸಾಲ್ಯಾನ್, ಅಭಿಲಾಷ್ ಶೆಟ್ಟಿ ಕಟೀಲು, ಧನುಷ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News