×
Ad

ಟೋಲ್ ವಸೂಲಿಗೆ ಖಂಡನೆ

Update: 2017-02-11 19:42 IST

ಉಡುಪಿ, ಫೆ.11: ಕಾಮಗಾರಿ ಪೂರ್ಣಗೊಳಿಸದೆ ಸಾಸ್ತಾನ ಮತ್ತು ಹೆಜ ಮಾಡಿ ಟೋಲ್ ವಸೂಲಿ ಪ್ರಾರಂಭಿಸಿದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಸ್ಥಳೀಯರಿಗೆ ಟೋಲ್ ರಿಯಾಯಿತಿ ನೀಡಬೇಕು. ಹೆದ್ದಾರಿ ಕೆಲಸ ಪೂರ್ಣಗೊಳ್ಳದೆ ಟೋಲ್ ವಸೂಲಿ ಮಾಡಬಾರದು. ಸರ್ವಿಸ್ ರಸ್ತೆಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿರುವ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ಈ ಸಂಬಂಧ ಸೋಮವಾರ ಕರೆ ನೀಡಲಾಗಿರುವ ಉಡುಪಿ ಬಂದ್‌ಗೆ ಬೆಂಬಲ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News