‘ಆಪರೇಶನ್ ಸಾಗರ್ ರಾಣಿ’ ದಿಢೀರ್ ಕಾರ್ಯಾಚರಣೆ

Update: 2017-02-12 18:22 GMT

ಕಾಸರಗೋಡು, ೆ.12: ಮೀನು ಹಾಳಾಗದಂತೆ ಕೆಲವು ರಾಸಾಯನಿಕ ವಸ್ತುಗಳನ್ನು ಮೀನುಗಾರರು ಮಿಶ್ರಣ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ‘ಆಪರೇಶನ್ ಸಾಗರ್ ರಾಣಿ’ ಎಂಬ ಹೆಸರಿನಲ್ಲಿ ಸಂಯುಕ್ತ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಆಹಾರ ಭದ್ರತಾ ಇಲಾಖೆ, ಮೀನುಗಾರಿಕಾ ಇಲಾಖೆ, ಮತ್ಸ್ಯ ೆಡ್ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ತಂಡ ಕಾಸರ ಗೋಡು ಮತ್ತು ಹೊಸದುರ್ಗದ ಹಲವು ಮೀನುಮಾರಾಟ ಕೇಂದ್ರಗಳಿಗೆ ದಿಢೀರ್ ದಾಳಿ ನಡೆಸಿ ಮಾರಾಟ ಮಾಡುತ್ತಿರುವ ಮೀನುಗಳನ್ನು ಪರೀಕ್ಷಿಸಿ ರಾಸಾಯನಿಕ ವಸ್ತುಗಳನ್ನು ಪ್ರಯೋಗಿಸಲಾಗಿದೆಯೇ ಎಂಬುದನ್ನು ಖಾತರಿ ಪಡಿಸಲು ಅವುಗಳ ಸ್ಯಾಂಪಲ್‌ಗಳನ್ನು ಪಡೆದು ಲ್ಯಾಬ್‌ಗಳಿಗೆ ಕಳುಹಿಸಿ ಕೊಟ್ಟಿದೆ.

 ಲ್ಯಾಬ್ ಪರೀಕ್ಷೆಯಲ್ಲಿ ರಾಸಾಯನಿಕ ಪದಾರ್ಥ ಬಳಸಿರುವುದು ಖಾತರಿ ಗೊಂಡಲ್ಲಿ ಅಂತಹ ಮೀನು ಮಾರಾಟ ಗಾರರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಆಹಾರ ಭದ್ರತಾ ಇಲಾಖೆಯ ಅಕಾರಿಗಳು ತಿಳಿಸಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಆರೋಗ್ಯಕ್ಕೆ ಹಾನಿಕರವಾದ ಅಮೋನಿಯಾ, ಪೋರ್ಮಾಲಿನ್, ಸೋಡಿಯಂ ಬೆನ್ ಸೋಯಟ್ಟ್ ಮೊದಲಾದ ರಾಸಾಯನಿಕಗಳನ್ನು ಮೀನು ಹಾಳಾಗದಿರಲು ಸಿಂಪಡಿಸುತ್ತಾರೆ. ಇದನ್ನು ಸೇವಿಸಿದಲ್ಲಿ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಆಹಾರ ಭದ್ರತಾ ಇಲಾಖೆಗೆ ಈಗಾಗಲೇ ಹಲವು ದೂರುಗಳು ಬಂದಿವೆ.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸುವ ತಂಡ ಮೊದಲು ಮೀನು ಮಾರಾಟ ಕೇಂದ್ರಗಳನ್ನು ಪರಿಶೀಲಿಸಿ ರಾಸಾಯನಿಕ ವಸ್ತು ಪ್ರಯೋಗದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಮೀನು ಮಾರಾಟಗಾರರಿಗೆ, ದಾಸ್ತಾನುಗಾರರಿಗೆ ಮತ್ತು ಬೆಸ್ತರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News