×
Ad

ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ಟಿಕೆಟ್ ರಹಿತ ಪ್ರಯಾಣ ಚಳವಳಿ

Update: 2017-02-14 17:56 IST

ಕಾಸರಗೋಡು,ಫೆ.14:  ಕಾಸರಗೋಡು - ಮಂಗಳೂರು  ರೂಟಿನಲ್ಲಿ   ಬಸ್ಸು  ಪ್ರಯಾಣ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು   ಕೆಎಸ್ಸಾರ್ಟಿಸಿ  ಬಸ್  ಟಿಕೆಟ್ ರಹಿತ ಪ್ರಯಾಣ ಚಳವಳಿ ನಡೆಸಿದರು.

ತಲಪಾಡಿಯಲ್ಲಿ   ಟೋಲ್  ವಸೂಲಿ  ಆರಂಭಿಸಿದ ಬಳಿಕ  ಕಾಸರಗೋಡು - ಮಂಗಳೂರು ನಡುವಿನ  ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು ಮೂರು ರೂ . ಹೆಚ್ಚಳ  ಮಾಡಲಾಗಿದ್ದು ,  ಏಕಾ ಏಕಿ  ಪ್ರಯಾಣ ದರ ಏರಿಕೆಗೆ  ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಳವಳಿ ಹಿನ್ನೆಲೆಯಲ್ಲಿ  ಕಾಸರಗೋಡು ಡಿಪ್ಪೋದಿಂದ ಮಂಗಳೂರಿಗೆ ಹೊರಟ ಕೆಎಸ್ಸಾರ್ಟಿಸಿಯ  ಬಸ್‌ ಗೆ  ಜಿಲ್ಲಾಧ್ಯಕ್ಷ  ಕೆ . ಶ್ರೀಕಾಂತ್ ನೇತೃತ್ವದ ಲ್ಲಿ  50  ರಷ್ಟು    ಕಾರ್ಯಕರ್ತರು  ಟಿಕೆಟ್ ಪಡೆಯದೆ  ಪ್ರಯಾಣ ಬೆಳೆಸಿದರು.

ಮಂಗಳೂರಿಗೆ ಟಿಕೆಟ್ ದರವಾಗಿ ಹಿಂದಿನ ದರವಾದ 50 ರೂ . ನೀಡಿದರೂ  ನಿರ್ವಾಹಕ 53 ರೂ . ನೀಡುವಂತೆ  ಸ್ಪಷ್ಟಪಡಿಸಿದರು.

ಇದರಿಂದ ಪ್ರಯಾಣಿಕರು ಟಿಕೆಟ್ ಪಡೆಯದೆ ಪ್ರಯಾಣ ಬೆಳೆಸಿದರು.  ಬಳಿಕ ಕುಂಬಳೆ ಪೊಲೀಸ್ ಠಾಣೆ ಸಮೀಪ ಪ್ರಯಾಣಿಕರನ್ನು  ಇಳಿಸಲಾಯಿತು. ಪೊಲೀಸರು ಮಾತುಕತೆ  ನಡೆಸಿದ ಬಳಿಕ  ಕಾರ್ಯಕರ್ತರು ಹಿಂತಿರುಗಿದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ .ಆರ್ ಸುನಿಲ್ , ಅನಿತಾ ಆರ್ . ನಾಯಕ್ , ಮಣಿಕಂಠ  ರೈ, ನಂಜಿಲ್ ಕುಂಞಿ ರಾಮನ್, ಹರೀಶ್ ನಾರಂಪಾಡಿ, ಅನಿತಾ ಆರ್. ನಾಯಕ್, ಕೆ.ಕೆ. ಕಯ್ಯಾರು, ಕೆ.ಪಿ.ವಲ್ಸರಾಜ್, ಬಾಬುರಾಜ್ ಮೊದಲಾದವರು ನೇತೃತ್ವ ನೀಡಿದರು.

ಕಾಸರಗೋಡು - ಮಂಗಳೂರು ನಡುವಿನ ಕರ್ನಾಟಕ ಮತ್ತು ಕೇರಳ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು   ಏರಿಕೆ ಮಾಡಲಾಗಿದೆ.

ಈ ಹಿಂದೆ ಕಾಸರಗೋಡಿನಿಂದ ಮಂಗಳೂರಿಗೆ 50 ರೂ . ಇದ್ದರೆ ಈಗ 53 ರೂ . ಗೆ ಏರಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News