ಗುತ್ತಿಗೆ ಆಧಾರದಲ್ಲಿ ವಾಹನ ಆಹ್ವಾನ
Update: 2017-02-14 21:15 IST
ಮಂಗಳೂರು, ಫೆ.14: ಸಹಾಯಕ ಕೃಷಿ ನಿರ್ದೇಶಕರ ಕಚೇರಿ ದರ್ಬೆ-ಪುತ್ತೂರು ತಾಲೂಕು ಈ ಕಚೇರಿಗೆ 2017-18 ನೆ ಸಾಲಿಗೆ ಅಧಿಕೃತ ಸರಕಾರಿ ಕೆಲಸಕ್ಕಾಗಿ ಗುತ್ತಿಗೆ ಆಧಾರದಲ್ಲಿ ವಾಹನ ಪಡೆಯುವ ಬಗ್ಗೆ ದರಪಟ್ಟಿ ಕರೆಯಲಾಗಿದೆ.
ಟೆಂಡರ್ ಪ್ರಕಟನೆಯನ್ನು ಇಲಾಖೆಯ ನೋಟಿಸ್ ಬೋರ್ಡ್ನಲ್ಲಿ ಮತ್ತು ರೈತ ಸಂಪರ್ಕ ಕೇಂದ್ರ ಪುತ್ತೂರು, ಉಪ್ಪಿನಂಗಡಿ ಹಾಗೂ ಕಡಬ ಕಚೇೀರಿಗಳಲ್ಲಿ ಪ್ರಕಟಿಸಲಾಗಿದೆ. ಮಾ. 14ರಂದು ಅಪರಾಹ್ನ 5:30 ರೊಳಗೆ ದರಪಟ್ಟಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಲು ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಪುತ್ತೂರು ಸಹಾಯಕ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.