ಪುತ್ತೂರು : ರಸ್ತೆ ಅಪಘಾತಕ್ಕೆ ಬಲಿಯಾದ ಉಪನ್ಯಾಸಕಗೆ 97 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ
ಪುತ್ತೂರು,ಫೆ.15; ಬೈಕ್ ಅಪಘಾತದಲ್ಲಿ ಮೃತಪಟ್ಟ ಇಂಜನಿಯರಿಂಗ್ ಕಾಲೇಜಿನ ಉಪನ್ಯಾಸಕರೋರ್ವರಿಗೆ ವಿಮಾ ಕಂಪೆನಿ 97,95,000 ರೂ. ಪರಿಹಾರ ನೀಡುವಂತೆ ಪುತ್ತೂರಿನ ಸಿವಿಲ್ ನ್ಯಾಯಾಲಯ ಆದೇಶಗೊಳಿಸಿ ತೀರ್ಪು ನೀಡಿದೆ.
2012 ಅಕ್ಟೋಬರ್ 15 ರಂದು ಕಬಕ ಗ್ರಾಮದ ಕುವೆತ್ತಿಲ ಎಂಬಲ್ಲಿ ಈ ಅಪಘಾತ ನಡೆದಿತ್ತು. ಅಪಘಾತದಲ್ಲಿ ಬೈಕ್ ಸವಾರನಾಗಿದ್ದ ಉಪನ್ಯಾಸಕ ಮೃತಪಟ್ಟಿದ್ದರು. ಮೃತಪಟ್ಟ ಬಳಿಕ ಅವರ ಕುಟುಂಬಸ್ಥರು ವಿಮಾ ಪರಿಹಾರ ಕೋರಿ ಪುತ್ತೂರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಕುಟುಂಬಸ್ಥರು ಒಂದು ಕೋಟಿ ರೂ. ಪರಿಹಾರ ನೀಡುವಂತೆಯೂ ಅರ್ಜಿಯಲ್ಲಿ ಮನವಿ ಮಾಡಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮೃತ ಉಪನ್ಯಾಸಕನ ಕುಟುಂಬಕ್ಕೆ ಭಾರೀ ಮೊತ್ತದ ಪರಿಹಾರವನ್ನು ನೀಡುವಂತೆ ವಿಮಾ ಕಂಪೆನಿಗೆ ಆದೇಶ ನೀಡಿದೆ.
ಉಪನ್ಯಾಸಕರು ಅವರ ವೇತನ, ವಿದ್ಯಾಬ್ಯಾಸ, ಅವಲಂಬಿತರ ಸಂಖ್ಯೆ, ಉದ್ಯೋಗದಲ್ಲಿ ಪದೋನ್ನತಿ ಸಾಧ್ಯತೆ ಮತ್ತು ನಿವೃತ್ತಿ ಬಳಿಕದ ವೇತನ ಇದೆಲ್ಲವನ್ನೂ ಪರಿಗಣಿಸಿದ ನ್ಯಾಯಾಲಯ ಕುಟುಂಬಸ್ಥರಿಗೆ 97 ಲಕ್ಷದ 95 ಸಾವಿರ ವಿಮಾ ಪರಿಹಾರ ನೀಡುವಂತೆ ಆದೇಶ ನೀಡಿದೆ.
ದೂರುದಾರರ ಪರವಾಗಿ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು