ಪಳನಿಸ್ವಾಮಿಗೆ ರಾಜ್ಯಪಾಲರಿಂದ ಆಹ್ವಾನ
Update: 2017-02-16 11:22 IST
ಚೆನ್ನೈ, ಫೆ.16: ಎಐಎಡಿಎಂಕೆ ಶಾಸಕಾಂಗ ಪಕ್ಷದ ಮುಖಂಡ ಎಡಪ್ಪಾಡಿ ಕೆ.ಪಳನಿಸ್ವಾಮಿಯವರನ್ನು ತಮಿಳುನಾಡು ಉಸ್ತುವಾರಿ ರಾಜ್ಯಪಾಲ ಸಿ.ವಿದ್ಯಾಸಾಗಾರ್ ರಾಜಭವನಕ್ಕೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಳನಿಸ್ವಾಮಿ 11:30ರ ಸುಮಾರಿಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
ಪಕ್ಷದ 10 ಮಂದಿ ಶಾಸಕರೊಂದಿಗೆ ರಾಜಭವನಕ್ಕೆ ಆಗಮಿಸುವಂತೆ ಪಳನಿಸ್ವಾಮಿಯವರನ್ನು ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಅದರಂತೆ ಪಳನಿಸ್ವಾಮಿ ಪಕ್ಷದ ಶಾಸಕರಾದ ಸಂಗೊಟ್ಟೆಯಾನೆ ತಂಗಮಣಿ, ವೇಲುಮಣಿ, ದಿಂಡಿಗಲ್ ಶ್ರಿನೀವಾಸನ್ ಸೇರಿದಂತೆ 10 ಮಂದಿಯೊಂದಿಗೆ ರಾಜಭವನತದತ್ತ ಪಯಣ ಬೆಳೆಸಿದ್ದಾರೆ.
ಈ ದಿಢೀರ್ ಬೆಳವಣಿಗೆ ಎಐಎಡಿಎಂಕೆ ಬೆಂಬಲಿಗರಲ್ಲಿ ಸಂತಸ ಮೂಡಿಸಿದೆ.